ಪುತ್ತೂರು ವಿದ್ಯುತ್ ಉಪಕರಣಗಳ ದುರಸ್ಥಿ, ಮಾರಾಟದ ಹೇಮಾ ಟ್ರೇಡರ‍್ಸ್ ಮಾಲಕ ಕೃಷ್ಣ ಭಟ್ ಹೃದಯಾಘಾತದಿಂದ ನಿಧನ

0

ಪುತ್ತೂರು: ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯಲ್ಲಿ ವಿದ್ಯುತ್ ಉಪಕರಣಗಳ ದುರಸ್ಥಿ, ಮಾರಾಟದ ಮಳಿಗೆ ಹೇಮಾ ಟ್ರೇಡರ‍್ಸ್ ಮಾಲಕ ಕೃಷ್ಣ ಭಟ್(73ವ) ಅವರು ಸೆ.16ರಂದು ಹೃದಯಾಘಾತದಿಂದ ನಿಧನರಾದರು.

ಕೊಂಬೆಟ್ಟು ಬಿಜೆಪಿ ಓಣಿ ನಿವಾಸಿಯಾಗಿರುವ ಕೃಷ್ಣ ಭಟ್ ಅವರು ಬೆಳಿಗ್ಗೆ ಪೇಟೆಗೆ ಹೊರಟ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here