ತಾಲೂಕು ಆಡಳಿತ ಸೌಧದಲ್ಲಿ ಅಪರ ಸರಕಾರಿ ವಕೀಲ ಅರುಣ್ ಬಿ ಕೆಯವರ ಸರಕಾರಿ ಕಛೇರಿ ಉದ್ಘಾಟನೆ

0

ಪುತ್ತೂರು: ಹಿರಿಯ ಶ್ರೇಣಿ ನ್ಯಾಯಾಲಯದ ಅರಪ ಸರಕಾರಿ ವಕೀಲರಾಗಿ ನೇಮಕಗೊಂಡಿರುವ ಅರುಣ್ ಬಿ.ಕೆ ಅವರ ಸರಕಾರಿ ಕಚೇರಿಯು ಪುತ್ತೂರು ತಾಲೂಕು ಆಡಳಿತದ 2ನೇ ಮಹಡಿಯಲ್ಲಿ ಸೆ.19ರಂದು ಉದ್ಘಾಟನೆಗೊಂಡಿದೆ.


ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ ವಿ ಅವರು ದೀಪ ಪ್ರಜ್ವಲನೆ ಮಾಡಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಪರ ಸರಕಾರಿ ವಕೀಲ ಪ್ರವೀಣ್ ಕುಮಾರ್, ಅರುಣ್ ಬಿ ಕೆ ಅವರ ಸೀನಿಯರ್ ಇಡಿ ವಿಶೇಷ ಸರಕಾರಿ ಅಭಿಯೋಜಕ ಮಹೇಶ್ ಕಜೆ, ತಹಶೀಲ್ದಾರ್ ನಿಸರ್ಗಪ್ರಿಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಉಪನೋಂದಾಣಿ ಕಚೇರಿಯ ಸತ್ಯೇಶ್, ವಕೀಲರಾದ ಚಿದಾನಂದ ಬೈಲಾಡಿ, ಕೆ ಶಂಭು ಭಟ್, ಶಿವಪ್ರಸಾದ್ ಇ, ವಕೀಲ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ, ಖಜಾಂಚಿ ಶ್ಯಾಮ್ ಪ್ರಸಾದ್ ಕೈಲಾರ್, ಅರುಣ್ ಬಿ.ಕೆ ಅವರ ಸಹೋದರಿ ನೋಟರಿ ವಕೀಲೆ ಅರ್ಚನಾ ಬಿ ಕೆ, ಕಚೇರಿಯ ಸಹೋದ್ಯೋಗಿ ನ್ಯಾಯವಾದಿ ಪ್ರಶಾಂತ್, ಅರುಣ್ ಬಿ.ಕೆ ಅವರ ಪತ್ನಿ ರೇಷ್ಮಾ, ಪುತ್ರ ಅರ್ಯನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here