ಅನಂತಾಡಿ: ಪ್ರಧಾನಿ ನರೇಂದ್ರ ಮೋದಿಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಸ್ವಚ್ಛತಾ ಅಭಿಯಾನ

0

ವಿಟ್ಲ: ಪ್ರಧಾನಿ ನರೇಂದ್ರ ಮೋದಿಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಅನಂತಾಡಿ ಗ್ರಾಮದ ವಿವಿದೆಡೆ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಪಕ್ಷದ ಹಿರಿಯ ಕಾರ್ಯಕರ್ತರಾದ ಬಾಲಕೃಷ್ಣ ಶೆಟ್ಟಿ, ವಿಟ್ಲಪಡ್ನೂರು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸನತ್ ಕುಮಾರ್ ರೈ, ಅನಂತಾಡಿ ಗ್ರಾಮ ಪಂಚಾಯತ್ ಅದ್ಯಕ್ಷ ಗಣೇಶ್ ಪೂಜಾರಿ ಬಂಟ್ರಿಂಜರಚೆ ಸಮ್ಮುಖದಲ್ಲಿ ಕರಿಂಕ ಬಸ್ ನಿಲ್ದಾಣದಲ್ಲಿ ಈ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಈ ಸ್ವಚ್ಚತಾ ಆಂದೋಲನದಡಿ ಕರಿಂಕ ಬಸ್ ನಿಲ್ದಾಣ, ಬಾಬಣಕಟ್ಟೆ ಪ್ರಯಾಣಿಕ ತಂಗುದಾಣ,ಕೂಡುರಸ್ತೆ ಬಸ್ ನಿಲ್ದಾಣ,ಕೂಡುರಸ್ತೆಯ ಅಶ್ವತ್ಥ ಕಟ್ಟೆ ,ಕೊರಗಜ್ಜ ಗುಡಿ ಸಮೀಪ,ದೇವಿನಗರ ಪ್ರಯಾಣಿಕರ ತಂಗುದಾಣ,ಕಿಂಕಿಣಿ ಬನ ಪರಿಸರ,ಬಾಕಿಲದ ಪ್ರಯಾಣಿಕ ತಂಗುದಾಣ,ಹಾಗೂ ಗೋಳಿಕಟ್ಟೆ ತಂಗುದಾಣ ಪರಿಸರ ಸ್ವಚ್ಛ ಗೊಳಿಸಲಾಯಿತು ಮಾತ್ರವಲ್ಲದೆ ಕರಿಂಕ ದೇವಾಲಯ ಮುಖ ಮಂಟಪದ ಎದುರು ಪಕ್ಷದ ವತಿಯಿಂದ ಹೂವಿನ ಗಿಡ ನೆಡಲಾಯಿತು.

ಶಕ್ತಿ ಕೇಂದ್ರ ಸಂಚಾಲಕ ನಾಗೇಶ್ ಭಂಡಾರಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕುಸುಮಾಧರ ಗೌಡ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಗೀತಾ, ಬೂತ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಾಬಲ ಪೂಜಾರಿ, ಪಂಚಾಯತ್ ಪಂಪ್ ಚಾಲಕ ಉಮೇಶ್ ಪೂಜಾರಿ,ಯುವ ಮೋರ್ಛಾ ಮಂಡಲ ಕಾರ್ಯದರ್ಶಿ ಹೇಮಂತ್, ಪದಾಧಿಕಾರಿಗಳಾದ ರಮೇಶ್ ಗೌಡ ತಾರಿಪಡ್ಪು, ಶಿವಾನಂದ ಮಣಿಯಾನಿ ದೇವಿನಗರ, ನವೀನ್ ಶೆಟ್ಟಿ ಪುಣ್ಕೆದಡಿ,ಅಶೋಕ್ ಕುಳಾಲ್,ಉಮೇಶ್ ಪೂಜಾರಿ ಗೋಳಿಕಟ್ಟೆ, ಬಾಲಕೃಷ್ಣ ಪೂಜಾರಿ ದರ್ಖಸು,ಸುರೇಶ್ ಬಂಟ್ರಿಂಜಾ,ನಾರಾಯಣ ಗೌಡ,ನವೀನ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here