ಕೊಯಿಲ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಇಬ್ಬರು ವೈದ್ಯರ ನೇಮಕ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಡಬದ ಡಾ.ಪ್ರಯಾಗ್ ರೈ ಹಾಗೂ ವಿಟ್ಲದ ಡಾ.ರವಿಶಂಕರ ಭಟ್‌ರವರು ವೈದ್ಯಾಧಿಕಾರಿಗಳಾಗಿ ನೇಮಕಗೊಂಡಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕುಂಟೋಡಿ ಜತ್ತಪ್ಪ ರೈ ಹಾಗೂ ಪುನೀತ ರೈ ದಂಪತಿ ಪುತ್ರ ಡಾ.ಪ್ರಯಾಗ್ ರೈಯವರು ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಪೂರ್ತಿಗೊಳಿಸಿ ಸೆ.12ರಂದು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಕಾರಿ ವೈದ್ಯರಾಗಿ ಸೇವೆ ಆರಂಭಿಸಿದ್ದಾರೆ. ವಿಟ್ಲ ನಿವಾಸಿಯಾಗಿರುವ ವಿಟ್ಲ ಶಂಕರ ಚಿಕಿತ್ಸಾಲಯದ ವೈದ್ಯ ಡಾ.ಪದ್ಮರಾಜ್ ಹಾಗೂ ಜಯಭಾರತಿ ದಂಪತಿ ಪುತ್ರ ಡಾ.ರವಿಶಂಕರ ಭಟ್‌ರವರು ಶಿವಮೊಗ್ಗದ ಸಿಮ್ಸ್‌ನಲ್ಲಿ ಎಂಬಿಬಿಎಸ್ ಪೂರ್ತಿಗೊಳಿಸಿ ಸೆ.9ರಂದು ಸರಕಾರಿ ವೈದ್ಯರಾಗಿ ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಆರಂಭಿಸಿದ್ದಾರೆ. ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಕೆಲ ಸಮಯಗಳಿಂದ ವೈದ್ಯಾಧಿಕಾರಿ ಹುದ್ದೆ ಖಾಲಿಯಾಗಿತ್ತು.

LEAVE A REPLY

Please enter your comment!
Please enter your name here