ಬಡಗನ್ನೂರುಃ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ

0

ಬಡಗನ್ನೂರುಃ ದ.ಕ. ಜಿಲ್ಲಾ ಪಂಚಾಯತ್ ಮಂಗಳೂರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತೂರು ಹಾಗೂ ಗ್ರಾಮ ಪಂಚಾಯತ್ ಬಡಗನ್ನೂರು ಇವರ ಸಂಯುಕ್ತ ಆಶ್ರಯದಲ್ಲಿ ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರವು ಸೆ.24ರಂದು ಗ್ರಾ.ಪಂ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
 ಕಾರ್ಯಕ್ರಮವನ್ನು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ. ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಗ್ರಾಮಸ್ಥರು ತಮ್ಮ ಸಾಕು ನಾಯಿಗಳನ್ನು ತಂದು ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದರು. ಕೊಳ್ತಿಗೆ ಪಶುವೈದ್ಯಾಧಿಕಾರಿ ಡಾ.ಎಂ.ಪಿ ಪ್ರಕಾಶ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಇದೊಂದು ಮಾನ್ಯತೀತ ಕಾಯಿಲೆ ಇದಕ್ಕೆ ಲಸಿಕೆ ಒಂದೇ ಮದ್ದು. ೨೦೩೦ರ ಹೊತ್ತಿಗೆ ಹುಚ್ಚು ನಾಯಿ ರೋಗವನ್ನು ದೇಶದಲ್ಲಿ ಸಂಪೂರ್ಣ ನಿರ್ಮೂಲನೆ ಮಾಡುವ ಉದ್ದೇಶದಿಂದ ತಾಲೂಕಿನ ಎಲ್ಲಾ ಕಡೆಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಉಪಾಧ್ಯಕ್ಷ ಸಂತೋಷ್ ಅಳ್ವ ಗಿರಿಮನೆ ಸಂದರ್ಭೋಚಿತ ಮಾತನಾಡಿದರು. ಗ್ರಾ.ಪಂ ಸದಸ್ಯೆ ಸುಜಾತ ಎಂ., ಈಶ್ವರಮಂಗಲ ಹಿರಿಯ ಪಶುವೈದ್ಯ ಪರಿವೀಕ್ಷಕ ಬಸವರಾಜು ಬಿ.ಕೆ, ಪುತ್ತೂರು ಹಿರಿಯ ಪಶುವೈದ್ಯ ಪರಿವೀಕ್ಷಕ ಪ್ರಶಾಂತ್, ಪಶುವೈದ್ಯ ಸಹಾಯಕರಾದ ಪುಂಡರೀಕಾಕ್ಷ ಪುತ್ತೂರು ಕುಮಾರ್ ಪೆರ್ಲಂಪ್ಪಾಡಿ, ಗ್ರಂಥ ಪಾಲಕಿ ಪ್ರೀಯಾ ಹಾಗೂ ಗ್ರಾಮಸ್ಥರು ಭಾಗವಹಿಸಿದರು.
ಕೌಡಿಚ್ಚಾರ್ ಹಿರಿಯ ಪಶುವೈದ್ಯ ಪರಿವೀಕ್ಷಕ ವೀರಪ್ಪ ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಸರೋಜ ಕುಲಾಲ್ ಹಾಗೂ ಭರತ್ ಸಹಕರಿಸಿದರು.
4 ತಂಡಗಳ ಮೂಲಕ  ಗ್ರಾ.ಪಂ ವ್ಯಾಪ್ತಿಯ 20 ಕೇಂದ್ರಗಳಲ್ಲಿ  ಮಧ್ಯಾಹ್ನ ಗಂ 1 ರ ತನಕ ಲಸಿಕೆ  ನೀಡುವ ಕಾರ್ಯಕ್ರಮ ನಡೆಯಿತು. 

LEAVE A REPLY

Please enter your comment!
Please enter your name here