ಸೆ.26-ಅ.5: ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆಪ್ಟೆಂಬರ್ ೨೬ರಿಂದ ಅಕ್ಟೋಬರ್ ೫ರ ವಿಜಯದಶಮಿಯವರೆಗೆ ನವರಾತ್ರಿ ಉತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ಅನ್ನಸಂತರ್ಪಣೆಯೊಂದಿಗೆ ನಡೆಯಲಿದೆ ಎಂದು ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಮತ್ತು ಉತ್ಸವ ಸಮಿತಿಯ ಸಂಚಾಲಕರು ತಿಳಿಸಿದ್ದಾರೆ.


ನವರಾತ್ರಿ ಸಂಭ್ರಮ:
ಸೆ.೨೬ರಂದು ಬೆಳಿಗ್ಗೆ ಬೊಳುವಾರು ವಿಶ್ವಕರ್ಮ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸಂಜೆ ಕೋಡಿಂಬಾಡಿ ಧರ್ಮಶ್ರೀ ಭಜನಾ ಮಂಡಳಿಯವರಿಂದ ಭಜನಾ ಸೇವೆ, ರಾತ್ರಿ ಸೇವಾರ್ಥಿಗಳಿಂದ ಶ್ರೀ ದೇವಿಗೆ ರಂಗಪೂಜೆ, ಸೆ.೨೭ರಂದು ಬೆಳಿಗ್ಗೆ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸಂಜೆ ಹೂಹಾರ ಕಟ್ಟುವ ಸ್ಪರ್ಧೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯವರಿಂದ ಭಜನಾ ಸೇವೆ, ರಾತ್ರಿ ಸಾಮೂಹಿಕ ಹೂವಿನ ಪೂಜೆ, ಮಹಿಳಾ ಸಭಾ ಕಾರ್ಯಕ್ರಮ-ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊರಿಯೋಗ್ರಾಫರ್ ಕಿರಣ್ ಮುರಳಿ ನಿರ್ದೇಶನದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ತಂಡ ಮುರಳಿ ಬ್ರದರ್‍ಸ್ ಪುತ್ತೂರು ಇವರಿಂದ `ನವನೃತ್ಯ ಧಾರೆ’ ನಡೆಯಲಿದೆ.

ಸೆ.೨೮ರಂದು ಬೆಳಿಗ್ಗೆ ಶಾಂತಿನಗರ ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸಂಜೆ ಪುತ್ತೂರು ಆರ್ಟ್ ಆಫ್ ಲಿವಿಂಗ್‌ನವರಿಂದ ಭಜನಾ ಸೇವೆ, ರಾತ್ರಿ ಶ್ರೀದೇವಿಗೆ ರಂಗಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾಷ್ಟ್ರೀಯ ಜಾದೂ ಪ್ರಶಸ್ತಿ ಮತ್ತು ಆರ್ಯಭಟ ಪ್ರಶಸ್ತಿ ವಿಜೇತ ಡಾ. ಸದಾನಂದ ಕುಂದರ್ ಹಾಗೂ ಬಳಗದವರಿಂದ `ವಿಸ್ಮಯ ಲೋಕ’, ಸೆ.೨೯ರಂದು ಬೆಳಿಗ್ಗೆ ಗಣಪತಿ ಹೋಮ, ಪುತ್ತೂರು ಶ್ರೀ ಲಕ್ಷ್ಮಿ ವೆಂಕಟ್ರಮಣ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸಂಜೆ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಶ್ರೀ ದೇವಿಗೆ ಅಲಂಕಾರ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ಮತ್ತು ಸ್ಥಳೀಯ ದಂಪತಿಗಳಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ದೇಶದ ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳ `ವೇಷಭೂಷಣ ಪ್ರದರ್ಶನ’, ಸೆ.೩೦ರಂದು ಬೆಳಿಗ್ಗೆ ಚಂಡಿಕಾ ಹೋಮ, ಪುತ್ತೂರು ವಿಶ್ವಹಿಂದೂ ಪರಿಷದ್ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸಂಜೆ ಬೊಳುವಾರು ವೈದೇಹಿ ವೈಷ್ಣವಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ, ನಂತರ ಶ್ರೀ ದೇವಿಗೆ ಸಾಮೂಹಿಕ ವಿಶೇಷ ರಂಗಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಪ್ರಸಾದಿತ ಯಕ್ಷಗಾನ ಮಂಡಳಿ ನಂದಾವರ ಇವರಿಂದ ಪೌರಾಣಿಕ ಯಕ್ಷಗಾನ `ಕದಂಬ ಕೌಶಿಕೆ’ ನಡೆಯಲಿದೆ. ಅ.೧ರಂದು ಬೆಳಿಗ್ಗೆ ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸಂಜೆ ಆಯ್ದ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧೆ `ತುಳುನಾಡ ಐಸಿರಿ’ ನಡೆಯಲಿದೆ. ಸಂಜೆ ಕರಾಯ ಶ್ರೀಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸೇವಾರ್ಥಿಗಳಿಂದ ಶ್ರೀ ದೇವಿಗೆ ರಂಗಪೂಜೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ. ಅ.೨ರಂದು ಗುಮ್ಮಟಗದ್ದೆ ಶ್ರೀಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸಂಜೆ ೩೪ ನೆಕ್ಕಿಲಾಡಿ ಆದರ್ಶನಗರ ಶ್ರೀ ರಾಮ ಭಜನಾ ಮಂಡಳಿಯವರಿಂದ ಭಜನಾ ಸೇವೆ, ರಾತ್ರಿ ಶ್ರೀದೇವಿಗೆ ವಿಶೇಷ ರಂಗಪೂಜೆ, ಬಳಿಕ ಸಭಾ ಕಾರ್ಯಕ್ರಮ, ಸನ್ಮಾನ, ಬಳಿಕ ಕುಡ್ಲ ಅಮ್ಮ ಕಲಾವಿದರಿಂದ `ಅಲೇ ಬುಡಿಯೆರ್‌ಗೆ’ ತುಳು ಹಾಸ್ಯ ನಾಟಕ ನಡೆಯಲಿದೆ.

ಅ.೩ರಂದು ಬೆಳಿಗ್ಗೆ ಪುತ್ತೂರು ಶ್ರೀ ಶಿವಶಂಕರ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸಂಜೆ ಕಬಕ ಮಹಾದೇವಿ ಭಜನಾ ಮಂಡಳಿಯವರಿಂದ ಭಜನಾ ಸೇವೆ, ರಾತ್ರಿ ಸೇವಾರ್ಥಿಗಳಿಂದ ಶ್ರೀದೇವಿಗೆ ರಂಗಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಠಂತಬೆಟ್ಟು ಪೊರ್ಲು ಕಲಾವಿದರಿಂದ `ದೂಮೆ ದುಬೈಗ್’ ತುಳು ನಾಟಕ ನಡೆಯಲಿದೆ. ಅ.೪ರಂದು ಬೆಳಿಗ್ಗೆ ಉಪ್ಪಿನಂಗಡಿ ರಾಮನಗರ ಶ್ರೀ ಶಾರದಾ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸಂಜೆ ಗ್ರಾಮದ ಅಂಗನವಾಡಿ ಪುಟಾಣಿಗಳಿಂದ `ಚಿಲಿಪಿಲಿ’, ಶ್ರೀದೇವಿಗೆ ವಿಶೇಷ ಪೂಜೆ, ನಂತರ ಕೋಡಿಂಬಾಡಿ, ಶಾಂತಿನಗರ ಮತ್ತು ಬೆಳ್ಳಿಪ್ಪಾಡಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ `ಸಾಂಸ್ಕೃತಿಕ ವೈವಿಧ್ಯ’, ವಿದುಷಿ ಸುರೇಖಾ ಹರೀಶ್ ಇವರ ಶಿಷ್ಯವೃಂದದವರಿಂದ ಭರತನಾಟ್ಯ ನಡೆಯಲಿದೆ ಎಂದು ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಮತ್ತು ಉತ್ಸವ ಸಮಿತಿಯ ಸಂಚಾಲಕರು ತಿಳಿಸಿದ್ದಾರೆ.

ಅ.೫ರ ವಿಜಯ ದಶಮಿಯಂದು ಸಾಮೂಹಿಕ ಪುದ್ವಾರ್, ಹುಲಿ ಕುಣಿತ, ದೀಪೋತ್ಸವ, ಶ್ರೀದೇವಿಗೆ ಅಲಂಕಾರ ಪೂಜೆ, ಅಭಿನಂದನಾ ಸಭೆ

ಅ.೫ರ ವಿಜಯದಶಮಿಯಂದು ಬೆಳಿಗ್ಗೆ ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಕ್ಷೀರಾಭಿಷೇಕ, ಲಲಿತಾ ಸಹಸ್ರನಾಮ ಪಾರಾಯಣ, ಶ್ರೀದೇವಿಗೆ ಮಹಾ ಅಲಂಕಾರ, ತ್ರಿಮಧುರ ನೈವೇದ್ಯ, ಕ್ಷೀರ ಪಾಯಸ ಸೇವೆ, ಅಕ್ಷರಾಭ್ಯಾಸ, ತುಲಾಭಾರ ಸೇವೆ, ಆಯುಧಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಮಧ್ಯಾಹ್ನ ಹೊಸ ಅಕ್ಕಿ ಊಟ `ಸಾಮೂಹಿಕ ಪುದ್ವಾರ್’, ಹುಲಿ ಕುಣಿತ, ಸಂಜೆ ಕಾವು ಶ್ರೀದುರ್ಗಾ ವಾಹಿನಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಸಂಜೆ ಶ್ರೀದುರ್ಗಾ ಪೂಜೆ, ರಾತ್ರಿ ದೀಪೋತ್ಸವ, ಶ್ರೀದೇವಿಗೆ ಅಲಂಕಾರ ಪೂಜೆ, ನಂತರ ಅಭಿನಂದನಾ ಸಭೆ, ಬಳಿಕ ಕೀರ್ತಿಶೇಷ ಚಿದಾನಂದ ಕಾಮತ್ ಕಾಸರಗಗೋಡು ನಿರ್ದೇಶನದೊಂದಿಗೆ ನಡೆದು ಬಂದ ಬಾರಿಸು ಕನ್ನಡ ಡಿಂಡಿಮ ತಂಡದಿಂದ `ಹಾಡು ಮತ್ತು ನೃತ್ಯಗಳ ವೈವಿಧ್ಯಮಯ ಕಾರ್ಯಕ್ರಮ’ ನಡೆಯಲಿದೆ.

LEAVE A REPLY

Please enter your comment!
Please enter your name here