ಕೆಯ್ಯೂರು: ಕಳವು ಮಾಡಿದ ಬ್ಯಾನರ್ ಮತ್ತೆ ಪ್ರತ್ಯಕ್ಷ

0

ಪುತ್ತೂರು: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ವಿಷಯ ಇರುವ ಬ್ಯಾನರ್ ಅನ್ನು ಕೆಯ್ಯೂರು ಗ್ರಾಮ ಪಂಚಾಯತ್ ಪರವಾನಗೆ ಪಡೆದು ಕೆಯ್ಯೂರು ಗ್ರಾಮೀಣ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ಕೆಯ್ಯೂರು ದೇವಿನಗರ ಜಂಕ್ಷನ್‌ನಲ್ಲಿ ಸೆ.22ರಂದು ಹಾಕಲಾಗಿತ್ತು.

ಈ ಬ್ಯಾನರ್ ಅನ್ನು ಸೆ.24ರಂದು ರಾತ್ರಿ ಯಾರೋ ಕಳವು ಮಾಡಿದ್ದರು. ಈ ಬಗ್ಗೆ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎ.ಕೆ ಜಯರಾಮ ರೈಯವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಕೂಡ ಮಾಡಿದ್ದರು. ಸೆ.28ರಂದು ಬೆಳಿಗ್ಗೆ ನೋಡಿದಾಗ ಕಳವು ಮಾಡಿದ ಬ್ಯಾನರ್ ಅನ್ನು ಮತ್ತೆ ಅದೇ ಜಾಗದಲ್ಲಿ ಹಾಕಿರುವ ಘಟನೆ ನಡೆದಿದೆ. ಬ್ಯಾನರ್‌ನಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿಯಲ್ಲಿ ನಾವು ಹಾಕಿದ ಜಾಗದಲ್ಲೇ ಮತ್ತೆ ಬ್ಯಾನರ್ ತಂದು ಕಟ್ಟಿ ಹೋಗಿದ್ದಾರೆ ಎಂದು ಗ್ರಾಮೀಣ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಜಯಂತ ಪೂಜಾರಿ ಕೆಂಗುಡೇಲು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here