ವಿದುಷಿ ಸುಚಿತ್ರಾ ಹೊಳ್ಳರಿಗೆ ಕೇರಳದ ಕಣ್ಣೂರುನಲ್ಲಿ ಸನ್ಮಾನ

0

ಉಪ್ಪಿನಂಗಡಿ: ಖ್ಯಾತ ವಿದುಷಿ ಸುಚಿತ್ರಾ ಹೊಳ್ಳ ಪುತ್ತೂರು ಇವರಿಗೆ ಕೇರಳದ ಕಣ್ಣೂರುನಲ್ಲಿರುವ ಕಣ್ಣೂರು ಸಂಗೀತ ಸಭಾ ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಕಾರ‍್ಯಕ್ರಮ ನಡೆಯಿತು.

ವಿದುಷಿ ಸುಚಿತ್ರಾ ಹೊಳ್ಳ ಅವರನ್ನು ಕಣ್ಣೂರು ಮಹಾನಗರ ಪಾಲಿಕೆ ಮೇಯರ್ ಬಿ.ಓ. ಮೋಹನನ್ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಕಣ್ಣೂರು ಸಂಗೀತ ಸಭಾ ಅಧ್ಯಕ್ಷ ಕೆ. ಪ್ರಮೋದ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೇರಳ ಕ್ಷೇತ್ರ ಕಲಾ ಅಕಾಡೆಮಿ ಅಧ್ಯಕ್ಷ ಡಾ. ಎಂ.ಎಸ್. ಪ್ರಶಾಂತ್ ಕೃಷ್ಣ, ಟಿ.ಪಿ. ಜಯಪಾಲನ್, ಇವಿಜಿ. ನಂಬಿಯಾರ್, ವನಜಾ ಲಕ್ಷ್ಮಣ್, ಕಣ್ಣೂರು ಸಂಗೀತ ಸಭಾ ಕಾರ‍್ಯದರ್ಶಿ ಡಿ.ಎನ್. ರಮೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here