ಧರಿತ್ರಿ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ

0

ಪುತ್ತೂರು: ಮುರದಲ್ಲಿ ವ್ಯವಹರಿಸುತ್ತಿರುವ ಧರಿತ್ರಿ ಸೌಹಾರ್ದ ಸಹಕಾರಿಯ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.25ರಂದು ಸಹಕಾರಿಯ ಅಧ್ಯಕ್ಷ ವಸಂತ ಗೌಡ ಪಿ. ರವರ ಅಧ್ಯಕ್ಷತೆಯಲ್ಲಿ ಮುರ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಹಕಾರಿಯ ನಡೆಯಿತು.

ಸಂಘದ ಉಪಾಧ್ಯಕ್ಷೆ ನೇತ್ರಾವತಿರವರು ಸಭೆಯ ನೋಟಿಸ್ ಓದಿ ದಾಖಲಿಸಿದರು. ಅಧ್ಯಕ್ಷ ವಸಂತ ಗೌಡ ಪಿ.ರವರು 2021-22ನೇ ಸಾಲಿನ ವಾರ್ಷಿಕ ವರದಿಯ ಮಂಜೂರಾತಿ, 2022-23ನೇ ಸಾಲಿನ ಅಂದಾಜು ಬಜೆಟ್ ಮತ್ತು ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳನ್ನು ಮಂಡಿಸಿದರು. ಸಿಬ್ಬಂದಿ ಗಣೇಶರವರು 2021-22ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮಂಜೂರಾತಿ ಮತ್ತು ಲೆಕ್ಕ ಪರಿಶೋಧಕರ ಆಯ್ಕೆಯ ಬಗ್ಗೆ ವಿಷಯ ಮಂಡಿಸಿದರು. ನಿರ್ದೇಶಕಿ ಪ್ರತಿಮಾ ಪ್ರಾರ್ಥಿಸಿದರು. ನಿರ್ದೇಶಕಿ ಪ್ರೇಮ ಸ್ವಾಗತಿಸಿದರು. ನಿರ್ದೇಶಕ ಮೋಹನ ಗೌಡ ವಂದಿಸಿದರು. ನಿರ್ದೇಶಕ ಸೇಸಪ್ಪ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ರವೀಂದ್ರ ಆಚಾರ್ಯ, ಚಿತ್ರಾ ಮತ್ತು ಸಿಬ್ಬಂದಿಗಳಾದ ಕಾವ್ಯ, ದಿವ್ಯಶ್ರೀ ಆರ್.ವಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here