ಸವಣೂರು ಗ್ರಾ.ಪಂ.ನಲ್ಲಿ ವಿಶೇಷ ಗ್ರಾಮ ಸಭೆ:ಸ್ವಚ್ಚತಾ ಸಾರಥಿಗಳಿಗೆ ಸನ್ಮಾನ

0

ಸವಣೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2023-24ನೇ ಸಾಲಿನ ಕ್ರಿಯಾ ಯೋಜನೆ ತಯಾರಿ ಮತ್ತು ಅಮೃತ ಗ್ರಾಮ ಯೋಜನೆಯ ಕ್ರಿಯಾ ಯೋಜನೆಯ ಬಗ್ಗೆ ವಿಶೇಷ ಗ್ರಾಮ ಸಭೆ ಅ.2ರಂದು ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.

ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಕಡಬ ತಾ.ಪಂ.ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಅವರು ಮಾಹಿತಿ ನೀಡಿದರು.ಸದಸ್ಯ ಗಿರಿಶಂಕರ ಸುಲಾಯ ಅವರು ಏಕಬಳಕೆಯ ಪ್ಲಾಸ್ಟಿಕ್ ಕುರಿತಾಗಿ ಮಾಹಿತಿ ನೀಡಿದರು.ಸಭೆಯಲ್ಲಿಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ,ಸದಸ್ಯರಾದ ಸತೀಶ್‌ ಅಂಗಡಿಮೂಲೆ,ಯಶೋಧಾ,ಜಯಶ್ರೀ,ಭರತ್‌ ರೈ,ತಾರಾನಾಥ ಸುವರ್ಣ ಬೊಳಿಯಾಲ,ಇಂದಿರಾ ಬೇರಿಕೆ,ಚಂದ್ರಾವತಿ ಸುಣ್ಣಾಜೆ,ತೀರ್ಥರಾಮ ಕೆಡೆಂಜಿ,ವಿನೋದಾ ರೈ ಚೆನ್ನಾವರ,ಚೇತನಾ ಪಾಲ್ತಾಡಿ,ಹರಿಕಲಾ ರೈ ಕುಂಜಾಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಸಭೆಯಲ್ಲಿ ಗ್ರಾ.ಪಂ.ವ್ಯಾಪ್ತಿಯ ಸ್ವಚ್ಚತಾ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಸಂಜೀವಿನಿ ಒಕ್ಕೂಟದ ಸದಸ್ಯರಾದ ವಸಂತಿ,ಲಲಿತಾ,ಚಂದ್ರಾವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾ.ಪಂ.ಸಿಬಂದಿಗಳಾದ ಪ್ರಮೋದ್‌ ಕುಮಾರ್‌ ರೈ,ಶಾರದಾ ಎಂ.,ಜಯಶ್ರೀ ,ಯತೀಶ್‌ ಕುಮಾರ್‌ ಸಹಕರಿಸಿದರು.ಸವಣೂರು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಎ.ಮನ್ಮಥ ಅವರು ಸ್ವಾಗತಿಸಿದರು.ಸಿಬಂದಿ ದಯಾನಂದ ಮಾಲೆತ್ತಾರು ವಂದಿಸಿದರು.

LEAVE A REPLY

Please enter your comment!
Please enter your name here