ಬಜತ್ತೂರು: ಕಾರು ಡಿಕ್ಕಿ, ಪಾದಚಾರಿಗೆ ಗಾಯ

0

ನೆಲ್ಯಾಡಿ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಜತ್ತೂರು ಗ್ರಾಮದ ಟಪ್ಪಾಲುಕೊಟ್ಟಿಗೆ ನಿವಾಸಿ ರುಕ್ಮಯ್ಯ ಗೌಡ(65)ಎಂಬವರು ಕಾರು ಡಿಕ್ಕಿಯಾಗಿ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಟಪ್ಪಾಲುಕೊಟ್ಟಿಗೆ ಎಂಬಲ್ಲಿ ಅ.6ರಂದು ರಾತ್ರಿ ನಡೆದಿದೆ.

ರುಕ್ಮಯ್ಯ ಗೌಡರವರು ಬಜತ್ತೂರು ಗ್ರಾಮದ ಟಪ್ಪಾಲುಕೊಟ್ಟಿಗೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು(ಕೆಎ 25 ಝೆಡ್ 2103)ಡಿಕ್ಕಿಯಾಗಿದೆ. ಪರಿಣಾಮ ರುಕ್ಮಯ್ಯ ಗೌಡರು ಕಾರಿನ ಮುಂಭಾಗದ ಗ್ಲಾಸಿನ ಮೇಲೆ ಬಿದ್ದು ನಂತರ ಕಾರಿನ ಮೇಲೆ ಎಸೆಯಲ್ಪಟ್ಟಿದ್ದು ಅವರ ಬಲ ಕಾಲಿನ ಕೋಲು ಕಾಲಿಗೆ ಗುದ್ದಿದ ರಕ್ತಗಾಯ, ತಲೆಯ ಹಿಂಬದಿ ಗುದ್ದಿದ ಗಾಯ, ಎಡಕಾಲಿನ ಪಾದದ ಬಳಿ ಗುದ್ದಿನ ನೋವು ದೇಹಕ್ಕೆ ಗುದ್ದಿದ ನೋವಾಗಿದೆ. ರುಕ್ಮಯ್ಯ ಗೌಡರವರು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳು ರುಕ್ಮಯ್ಯ ಗೌಡರವರು ನೀಡಿದ ದೂರಿನಂತೆ ಆರೋಪಿ ಕಾರು ಚಾಲಕ ಶಿವರಾಮರ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here