ಹಾರಾಡಿಯಲ್ಲಿ ರಸ್ತೆ ದಾಟುತ್ತಿದ್ದ ನಗರಸಭೆ ಪೌರ ಕಾರ್ಮಿಕೆಗೆ ಅಪರಿಚಿತ ವಾಹನ ಡಿಕ್ಕಿ

0

ಪುತ್ತೂರು: ರಸ್ತೆ ದಾಟುತ್ತಿದ್ದ ನಗರಸಭೆ ಪೌರ ಕಾರ್ಮಿಕೆಯೊಬ್ಬರಿಗೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಘಟನೆ ಅ.15ರ ರಾತ್ರಿ ನಡೆದಿದೆ.
ಪುತ್ತೂರು ಪೇಟೆಯಲ್ಲಿ ಬೆಳಗ್ಗೆ ಸ್ವಚ್ಚತಾ ಕಾರ್ಯ ನಿರ್ವಹಿಸುವ ನಗರಸಭೆ ಪೌರ ಕಾರ್ಮಿಕೆ ಶೀಲವ್ವ ಗಾಯಗೊಂಡವರು. ಅವರು ರಸ್ತೆ ದಾಟುತ್ತಿದ್ದ ವೇಳೆ ವಾಹನವೊಂದು ಅವರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಪೌರ ಕಾರ್ಮಿಕೆ ಶೀಲವ್ವ ಅವರು ಕಾಲು ಮುರಿತಕ್ಕೊಳಗಾಗಿದ್ದಾರೆ. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here