ಮಹೇಶ್ ಗೌಡ ದಂಡಿನಮನೆರವರಿಂದ ಶಾಸಕರಿಗೆ ಸನ್ಮಾನ

0

ಪುತ್ತೂರು: ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಅ. 19ರಂದು ಶಾಸಕರ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿ. ನೀಲಮ್ಮ ದುಗ್ಗಪ್ಪ ಗೌಡ ದಂಡಿನಮನೆ ಪೆರ್ಲಂಪಾಡಿಯವರ ಪುಣ್ಯ ಸ್ಮರಣಾ ದಿನದ ಅಂಗವಾಗಿ ನಡೆದ ಪೆರ್ಲಂಪಾಡಿ ಸರಕಾರಿ ಹಿ. ಪ್ರಾ. ಶಾಲೆ ಹಾಗೂ ಷಣ್ಮುಖದೇವ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ಕೋಶ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಬೇಕಿದ್ದ ಶಾಸಕ ಸಂಜೀವ ಮಠಂದೂರುರವರು ಬೆಂಗಳೂರಿನಲ್ಲಿದ್ದ ಕಾರಣ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈ ನಿಟ್ಟಿನಲ್ಲಿ ಅವರ ಕಚೇರಿಗೆ ಅ.19ರಂದು ಭೇಟಿ ನೀಡಿದ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥರಾದ ಪುತ್ತೂರಿನ ಮುತ್ತು ಖ್ಯಾತಿಯ ಮಹೇಶ್ ಗೌಡ ದಂಡಿನ ಮನೆಯವರು ಶಾಸಕರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ದಂಡಿನ ಮನೆ ಕುಟುಂಬದವರ ಕಾರ್ಯಕ್ರಮದ ಬಗ್ಗೆ ಶಾಸಕರು ಈ ಸಂದರ್ಭದಲ್ಲಿ ಮೆಚ್ಚುಗೆ ಸೂಚಿಸಿ ತಂದೆ ತಾಯಿಯ ಪುಣ್ಯಸ್ಮರಣಾ ದಿನದಂದು ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕೋಶ ಪುಸ್ತಕವನ್ನು ನೀಡಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here