ಗೋಳಿತ್ತೊಟ್ಟು: ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞದ ಆಮಂತ್ರಣ ಪತ್ರ ಬಿಡುಗಡೆ

0

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಪೆರಣ ಭಂಡಾರ ಮನೆಯಲ್ಲಿ ನ.27ರಿಂದ ಡಿ.4ರ ತನಕ ನಡೆಯುವ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಪಟ್ರಮೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.
ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಶಬರಾಯರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಪೆರಣ ಭಂಡಾರ ಮನೆಯ ಮೊಕ್ತೇಸರರಾದ ವಿಶ್ವನಾಥ ಗೌಡ ಪೆರಣ, ಶ್ರೀ ಮದ್ಬಾಗವತ ಸಪ್ತಾಹ ಜ್ಞಾನ ಯಜ್ಞ ಸಮಿತಿಯ ಅಧ್ಯಕ್ಷ ಒಡ್ಯಪ್ಪ ಗೌಡ ಪೆರಣ, ಪ್ರಧಾನ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು, ಉಪಾಧ್ಯಕ್ಷ ನಾಗಪ್ಪ ಗೌಡ ಅಲಂಗೂರು, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷರೂ, ಸಮಿತಿ ಕೋಶಾಧಿಕಾರಿಯೂ ಆದ ಜನಾರ್ದನ ಗೌಡ ಪಟೇರಿ, ಆರ್ಥಿಕ ಸಮಿತಿ ಸಂಚಾಲಕ ಶೇಖರ ಗೌಡ ಅನಿಲಬಾಗ್, ಆಹಾರ ಸಮಿತಿ ಸಂಚಾಲಕ ಆನಂದ ಗೌಡ ದೇವಸ್ಯಕೋಡಿ, ಚಪ್ಪರ, ಧ್ವನಿ ಮತ್ತು ಬೆಳಕು ಸಮಿತಿ ಸಂಚಾಲಕ ರಮೇಶ ಗೌಡ ಕಲ್ಲಡ್ಕ, ಅಲಂಕಾರ ಸಮಿತಿ ಸಂಚಾಲಕ ನವೀನ ಗೌಡ ಕೋಡಿಯಡ್ಕ, ಪ್ರಚಾರ ಸಮಿತಿ ಸಂಚಾಲಕ ಪುರುಷೋತ್ತಮ ಕುದ್ಕೋಳಿ, ಹೊರೆಕಾಣಿಕೆ ಸಮಿತಿ ಸಂಚಾಲಕ ಡೊಂಬಯ್ಯ ಗೌಡ ಗೌಡತ್ತಿಗೆ, ವಿವಿಧ ಸಮಿತಿ ಸದಸ್ಯರಾದ ಚಂದ್ರ ಅಲಂಗೂರು, ಉಮೇಶ್ ಅಲಂಗೂರು, ದೇವಣ್ಣ ಬೊಟ್ಟಿಮಜಲು, ರಾಜೇಶ್ ಪೆರ್ಮುಡ, ದಿನೇಶ್ ಬರಮೇಲು, ರಘು ಕುದ್ಕೋಳಿ, ಶ್ರೀನಿವಾಸ ಕೋಡಿ, ಶಿವಪ್ಪ ಕೋಡಿ, ಚೈತ್ರಾ ಕೋಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here