ಜಿ. ಎಲ್. ಆಚಾರ್ಯ ಸ್ವರ್ಣ ಮಳಿಗೆಗಳಲ್ಲಿ ‘ದೀಪಾವಳಿ ಆಫರ್’

0

ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಜಿ. ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ಪುತ್ತೂರು, ಹಾಸನ, ಸುಳ್ಯ ಹಾಗೂ ಕುಶಾಲನಗರ ಮಳಿಗೆಗಳಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ನೀಡಲಿದ್ದಾರೆ.

ಅ. 22 ರಿಂದ 26ರವರೆಗೆ ಗ್ರಾಹಕರು ಪ್ರತೀ ಒಂದು ಗ್ರಾಂ ಚಿನ್ನ ಖರೀದಿಗೆ ರೂ 125/- ರವರೆಗೆ ರಿಯಾಯಿತಿ. ವಜ್ರಾಭರಣಗಳು, ಬೆಳ್ಳಿಯ ಆಭರಣಗಳು ಹಾಗೂ ಬೆಳ್ಳಿಯ ಪರಿಕರಗಳಿಗೂ ವಿಶೇಷ ಆಫರ್ ಮಾತ್ರವಲ್ಲದೆ, ಹಬ್ಬದ ಸಂದರ್ಭದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಇಳಿಕೆಯ ಪ್ರಯೋಜನವನ್ನೂ ಪಡೆಯಬಹುದಾಗಿದೆ.

ಸ್ವರ್ಣೋದ್ಯಮದಲ್ಲಿ 65 ವರ್ಷಗಳಿಂದ ಜನಮನ ಗೆದ್ದು, ಚಿನ್ನಾಭರಣಪ್ರಿಯರ ಮನೆಮಾತಾಗಿ ಕರಾವಳಿ, ಮಲೆನಾಡುಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್ ಪುತ್ತೂರು ಮುಖ್ಯ ರಸ್ತೆಯಲ್ಲಿ 3 ಮಹಡಿಗಳ ಸುಂದರ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ವಿಶಾಲ ಪಾರ್ಕಿಂಗ್, ಲಿಫ್ಟ್ ವ್ಯವಸ್ಥೆಯ ಜತೆಗೆ ಸಂಪೂರ್ಣ ಹವಾನಿಯಂತ್ರಿತ ಮಳಿಗೆ ಇದಾಗಿದೆ. ಗ್ರಾಹಕರಿಗೆ ಆಹ್ಲಾದಕರ ವಾತಾವರಣ ಇಲ್ಲಿದ್ದು, ಪ್ರತೀ ವಯಸ್ಸಿನ, ಪ್ರತೀ ಅಭಿರುಚಿಯ ಗ್ರಾಹಕರಿಗೂ ಒಪ್ಪುವ ಸಂಗ್ರಹಗಳು ಇಲ್ಲಿದೆ. ‘ಪ್ರತೀ ಪೀಳಿಗೆಯ ಚಿನ್ನದ ಮಳಿಗೆ’ ಎಂಬ ಘೋಷ ವಾಕ್ಯ ಇಲ್ಲಿ ಸಾರ್ಥಕತೆ ಪಡೆದಿದೆ.‌

1000ಕ್ಕೂ ಮಿಕ್ಕಿದ ಹೊಸ ಹೊಸ ಬಗೆಯ ವಿನ್ಯಾಸದ ನೆಕ್ಲೆಸ್‌ಗಳು, ವೆಡ್ಡಿಂಗ್ ಕಲೆಕ್ಷನ್, ಪ್ರಾಚಿ ಎಂಬ ಹೆಸರಿನ ಆಂಟಿಕ್ ಆಭರಣಗಳು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ಒಪ್ಪುವ ಆಭರಣಗಳ ಸಂಗ್ರಹ ಇಲ್ಲಿದೆ. ವ್ಯವಹಾರದಲ್ಲಿ ಪಾರದರ್ಶಕತೆ ಹೊಂದಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್, ಪ್ರತೀ ಆಭರಣಗಳ ಜೊತೆಗೆ ನೀಡುವ ದರಪಟ್ಟಿಯಲ್ಲಿ ಆಭರಣದ ತೂಕ, ಕಲ್ಲಿನ ತೂಕ, ಮಜೂರಿ, ತೇಮನ್ ಇತ್ಯಾದಿ ವಿವರಗಳನ್ನು ಪ್ರತ್ಯೇಕವಾಗಿ ತೋರಿಸುತ್ತದೆ. ಸಂಸ್ಥೆಯಲ್ಲಿ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಕ್ಯಾಶ್‌ಲೆಸ್ ವ್ಯವಹಾರ ಸುಲಲಿತವಾಗಿ ಮಾಡಬಹುದು.

ರೂ. 3 ಸಾವಿರದಿಂದ ರೂ. 15 ಲಕ್ಷದವರೆಗಿನ ವಜ್ರಾಭರಣಗಳ ಸಂಗ್ರಹ ಇಲ್ಲಿದ್ದು, ರಾಜ್ಯದ ಎಕ್ಸ್‌ಕ್ಲೂಸಿವ್ ವಜ್ರಾಭರಣ ಸಂಗ್ರಹದ ಕೆಲವೇ ಮಳಿಗೆಗಳಲ್ಲಿ ಇದೂ ಒಂದಾಗಿದೆ. ಅಂತರ್ರಾಷ್ಟ್ರೀಯ ಲ್ಯಾಬ್ ನೀಡುವ ಸರ್ಟಿಫಿಕೇಟ್ ಹೊಂದಿರುವ ಡೈಮಂಡ್ ಸಂಗ್ರಹ ಜಿ.ಎಲ್. ನಲ್ಲಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಣಮಟ್ಟ, ನಗುಮುಖದ ಸೇವೆ ಹಾಗೂ ವಿಶ್ವಾಸಾರ್ಹ ವ್ಯವಹಾರದ ಮೂಲಕ ಜನಮನ ಗೆದ್ದು ತನ್ನದೇ ಬ್ರಾಂಡ್ ಸಂಪಾದಿಸಿ ದ.ಕ., ಉಡುಪಿ, ಕಾಸರಗೋಡು, ಕೊಡಗು, ಹಾಸನ, ಮೈಸೂರು ಮತ್ತು ಬೆಂಗಳೂರು ಭಾಗದಿಂದಲೂ ಚಿನ್ನಾಭರಣ ಪ್ರಿಯರು ಜಿ.ಎಲ್.ಗೆ ಬರುತ್ತಿದ್ದು, ಸಂಸ್ಥೆಯ ಮೇಲಿನ ವಿಶ್ವಾಸವೇ ಇದಕ್ಕೆ ಕಾರಣ.

– ಬಲರಾಮ ಆಚಾರ್ಯ, ಆಡಳಿತ ನಿರ್ದೇಶಕರು

LEAVE A REPLY

Please enter your comment!
Please enter your name here