ಅ.23 ಪರ್ಲಡ್ಕದಲ್ಲಿ ಜಿಲ್ಲಾ ಮಟ್ಟದ ಮದೀನಾ ಫ್ಯಾಶನ್

0

ಪುತ್ತುರು : ಎಸ್‌ಕೆಎಸ್‌ಎಸ್‌ಎಫ್ ದ.ಕ. ಈಸ್ಟ್ ಜಿಲ್ಲಾ ಸಮಿತಿಯ ಅಧೀನದಲ್ಲಿ ವಿಶ್ವ ಪ್ರವಾದಿ(ಸ)ರ ಜನ್ಮದಿನಾಚರಣೆಯ ಅಂಗವಾಗಿ ‘ನ್ಯಾಯ ವಂಚಿತ ಜಗತ್ತು: ನ್ಯಾಯ ನಿರ್ಭರ ಪ್ರವಾದಿ (ಸ) ಎಂಬ ಧ್ಯೇಯ ವಾಕ್ಯದೊಂದಿಗೆ ರಬೀಹ್ ಕ್ಯಾಂಪೈನ್ ಶಾಖೆ, ಕ್ಲಸ್ಟರ್, ಮತ್ತು ವಲಯ ಮಟ್ಟಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು ಇದರ ಜಿಲ್ಲಾಮಟ್ಟದ ಸಮಾರೋಪ ಕಾರ್ಯಕ್ರಮ ಪರ್ಲಡ್ಕ ಮಸೀದಿ ವಠಾರದಲ್ಲಿ ಅ.23ರಂದು ‘ಮದೀನಾ ಫ್ಯಾಶನ್’ ಎಂಬ ಹೆಸರಿನೊಂದಿಗೆ ನಡೆಯಲಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಕೋಲ್ವೆ ಮತ್ತು ಉಪಾಧ್ಯಕ್ಷ ಅಬ್ದುಲ್ ರಶೀದ್ ರಹ್ಮಾನಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಪ್ರವಾದಿ(ಸ) ಪ್ರಕೀರ್ತನೆಗಳು ಮತ್ತು ಅವರ ಕುರಿತ ಸಂದೇಶ ಪ್ರಭಾಷಣವನ್ನೊಳಗೊಂಡ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಗ್ರಾಂಡ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಸಮಾರಂಭ, ಅಶ್ರಖ ಬೈತ್, ಖವಾಲಿ, ಮೆಹ್ಫಿಲೇ ಮದೀನ, ಗೌರವ ಸಮರ್ಪಣೆ, ನಬಿ ಮದ್‌ಹ್ ಹಾಡು, ಬುರ್ದಾ ಆಲಾಪಣೆ, ಮದುಹ್‌ರಸೂಲ್ ಪ್ರಭಾಷಣ, ಇಸ್ತಿಗ್ಫಾರ್ ಮತ್ತು ಸಾಮೂಹಿಕ ಪ್ರಾರ್ಥನಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಸಮಾರಂಭದ ಧ್ವಜಾರೋಹಣವನ್ನು ಪರ್ಲಡ್ಕ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ರಝಾಕ್ ನಡೆಸಲಿದ್ದಾರೆ.

ಅಸರ್ ನಮಾಝಿನ ಬಳಿಕ ನಡೆಯಲಿರುವ ಗ್ರಾಂಡ್ ಮೌಲೀದ್ ಮಜ್ಲಿಸ್ ಕಾರ್ಯಕ್ರಮಕ್ಕೆ ಸಯ್ಯದ್ ಅಹ್ಮದ್ ಪೊಕೋಯ ತಂಙಳ್ ಪುತ್ತೂರು, ಸಯ್ಯದ್ ಶರಫುದ್ದೀನ್ ತಂಙಳ್ ಸಾಲ್ಮರ, ಸಯ್ಯದ್ ಅಮೀರ್ ತಂಙಳ್ ಕಿನ್ಯ, ಸಯ್ಯದ್ ಯಹ್ಯಾ ತಂಙಳ್ ಪೋಳ್ಯ ಸಯ್ಯದ್ ಅಕ್ರಂ ಅಲೀ ತಂಙಳ್ ಕರಾವಳಿ, ಸಯ್ಯದ್ ಅನಸ್ ತಂಙಳ್ ಕರುವೇಲು, ಸಯ್ಯದ್ ಜುನೈದ್ ತಂಙಳ್ ಆತೂರು, ಸಯ್ಯದ್ ತ್ವಾಹ ತಂಙಳ್ ಬೆಳ್ತಂಗಡಿ, ಸಯ್ಯದ್ ಬುರ್ಹಾನ್ ತಂಙಳ್ ಮಾಡನ್ನೂರು, ಸಯ್ಯದ್ ಜಲಾಲ್ ತಂಙಳ್ ಈಶ್ವರಮಂಗಲ, ಸಯ್ಯದ್ ಅಪ್ಪಂ ತಂಙಳ್ ಕರಾವಳಿ, ಸಯ್ಯದ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ ನೇತೃತ್ವ ನೀಡಲಿದ್ದಾರೆ. ಸಯ್ಯದ್ ಹಬೀಬುರಹ್ಮಾನ್ ತಂಙಳ್ ಮುಕ್ವೆ ಇಸ್ತಿಗ್ಫಾರ್ ಮತ್ತು ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ.

ಉದ್ಘಾಟನಾ ಸಮಾರಂಭವು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದ.ಕ. ಜಿಲ್ಲಾ ಅಧ್ಯಕ್ಷರಾದ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಮಾರಂಭ ಉದ್ಘಾಟಿಸಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾಗಿರುವ ಶೈಖುನಾ ಉಸ್ಮಾನುಲ್ ಫೈಝಿಯವರಿಗೆ ಗೌರವ ಸಮರ್ಪಣೆ ನಡೆಯಲಿದೆ.

ಶೈಖುನಾ ಬಂದ್ರಾಣ ಉಸ್ತಾದ್, ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ಅನುಗ್ರಹ ಭಾಷಣ ನಡೆಸಲಿದ್ದಾರೆ. ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ, ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಮತ್ತು ಪರ್ಲಡ್ಕ ಖತೀಬ್ ಅಬ್ದುರಶೀದ್ ರಹ್ಮಾನಿ ಶುಭಹಾರೈಸಲಿದ್ದಾರೆ.

ಕೇರಳದ ಪ್ರಸಿದ್ಧ ಪ್ರವಾದಿ ಸಂದೇಶಗಾರ ಬಶೀರ್ ಫೈಝಿ ದೇಶಮಂಗಳರವರು ಮುಖ್ಯಭಾಷಣ ಮತ್ತು ಜಿಲ್ಲೆಯ ವಿವಿಧ ದರ್ಸ್, ಕಾಲೇಜು ವಿದ್ಯಾರ್ಥಿಗಳಿಂದ ಪ್ರವಾದಿ ಮದ್‌ಗಾನ ನಡೆಯಲಿದೆ. ಎಸ್‌ಕೆಎಸ್‌ಎಸ್‌ಎಫ್ ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಾಬಿರ್ ಫೈಝಿ ಬನಾರಿ, ಎಸ್‌ಕೆಎಸ್‌ಎಸ್‌ಎಫ್ ದ.ಕ. ಈಸ್ಟ್ ಅಧ್ಯಕ್ಷರಾದ ತಾಜುದ್ದೀನ್ ರಹ್ಮಾನಿ ಕುಂಬ್ರ ಕಾರ್ಯಕ್ರಮ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ  SKSSF ರಾಜ್ಯ ಸಮಿತಿ ಚೆಯರ್ಮಾನ್ ಇಕ್ಬಾಲ್ ಬಾಳಿಲ
SKSSF ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮುಕ್ವೆ ಪುತ್ತೂರು ವಲಯಾಧ್ಯಕ್ಷ ಬಾತಿಷಾ ಹಾಜಿ ಪಾಟ್ರಕೋಡಿಕೇಂದ್ರ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here