ಪುತ್ತೂರಿನ ಹೆಸಾರಾಂತ ಸುಡುಮದ್ದು ವಿತರಕ ಸಂಸ್ಥೆ ಎ.ವಿ.ಪೈ ವತಿಯಿಂದ ದೀಪಗಳ ಹಬ್ಬಕ್ಕೆ ಹಸಿರು ಪಟಾಕಿ

0

ಪುತ್ತೂರು : ಸುಡುಮದ್ದುಗಳ ವಿತರಣೆಯಲ್ಲಿ ಕಳೆದ 67ವರುಷಗಳಿಂದ ,ಅಂದರೆ ಸುಮಾರು ಹತ್ತಿರತ್ತಿರ ಏಳು ದಶಕಗಳತ್ತ ತನ್ನ ಪಯಾಣವನ್ನು ಸಾಗಿಸುತ್ತಿರುವುದರೊಂದಿಗೆ , ಪ್ರಾಮಾಣಿಕ ಸೇವೆಯನ್ನು ನೀಡಿ , ಗ್ರಾಹಕ ಜನತೆಯ ಮನಗೆದ್ದಿರುವ ನಂಬಲರ್ಹ ಸಂಸ್ಥೆಯೆಂದರೆ , ಕೊಂಬೆಟ್ಟು ವರದರಾಯ ಪೈ ಇವರ ಮಾಲಕತ್ವದ  ಕೋರ್ಟುರೋಡ್ ಮುಖ್ಯರಸ್ತೆಯಲ್ಲಿ ವ್ಯವಹಾರಿಸುತ್ತಿರುವ ಎ.ವಿ.ಪೈ ಸಂಸ್ಥೆ.
ಇದೀಗ ಎಲ್ಲೆಡೆ ದೀಪಾವಳಿ ಸಂಭ್ರಮ ,ಸಡಗರ ಕಳೆಗಟ್ಟಿದ್ದು , ಈ ದೀಪಗಳ ಹಬ್ಬಕ್ಕೆ ಪರಿಸರ ಸ್ನೇಹಿ,ರಾಸಾಯನಿಕ ಮುಕ್ತ ಹಸಿರು ಪಟಾಕಿ ವ್ಯಾಪಾರವು ಎ.ವಿ.ಪೈ ಯಲ್ಲಿ ತುಸು ಜೋರಾಗಿಯೇ ಆರಂಭಗೊಂಡಿದೆ.
ವರುಷದ ಎಲ್ಲಾ ದಿನಗಳಲ್ಲೂ ಭೂತ ಕೋಲ ,ನೇಮ ,ಯಕ್ಷಗಾನ ,ಜಾತ್ರೆ ,ಬ್ರಹ್ಮಕಲಶ ,ಮದುವೆ ಹಾಗೂ ಇನ್ನಿತರ ಹಲವು ಶುಭಕಾರ್ಯಗಳ ಜೊತೆಗೆ ಕೃಷಿಕಾರ್ಯ ಮಾಡುವ ವರ್ಗಕ್ಕೂ ಕೂಡ ಈ ಪಟಾಕಿ ಮಳಿಗೆಯ ಅನಿವಾರ್ಯತೆಯೂ ಸದಾ ಬೇಕಾಗಿದ್ದು ,ಎಲ್ಲಾ ಋತುವಿನಲ್ಲೂ ಪಟಾಕಿ ದರವು ಸ್ಪರ್ದಾತ್ಮಕ ದರದಲ್ಲಿ ಸಿಗುತ್ತದೆ ಎಂದು ಮಾಲಕ ವರದರಾಯ ಪೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here