ರಕ್ತಸಂಜೀವಿನಿ ಬ್ಲಡ್ ಗ್ರೂಪ್ ವತಿಯಿಂದ ವೈಷ್ಣವಿ ಉಜಿರೆಯವರಿಗೆ ಸನ್ಮಾನ

0

ಪುತ್ತೂರು: ರಕ್ತಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ ವತಿಯಿಂದ ತುಳುನಾಡಿನಪ್ರತಿಭೆ ವೈಷ್ಣವಿ ಉಜಿರೆಯವರನ್ನು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ವೈಷ್ಣವಿಯವರ ಸ್ವಗೃಹದಲ್ಲಿ ಅ. 26 ರಂದು ಸನ್ಮಾನಿಸಿದರು.ಮುಖ್ಯ ಅತಿಥಿಯಾಗಿ ಸೀತಾ ಭಟ್ ಅರ್ಲಪದವು ಪಾಣಾಜೆ ಹಾಗೂ ಮಲವಂತಿಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಉಪಾಧ್ಯಕ್ಷ ಡಿ. ದಿನೇಶ್ ಗೌಡ,‌ ಕಲಾವಿದರಾದ ಚಿತ್ರನಟ ಕಷ್ಣಪ್ಪ ಶಿವನಗರ ಹಾಗೂ ವೈಷ್ಣವಿಯವರ ತಂದೆ ತುಕಾರಾಮ ಹಾಗೂ ತಾಯಿ ಪೂರ್ಣಿಮಾ, ಅಜ್ಜ ಬಾಬು ಗೌಡ, ಅಜ್ಜಿ ಸುಗುಣವತಿ,‌‌ ಮಾವ ರಾಧಕೃಷ್ಣ ಅತ್ತೆ ಭವ್ಯ ಹಾಗೂ ಮನೆಯವರು ಉಪಸ್ಥಿತರಿದ್ದರು. ಸ್ನೇಹ ಸಿಲ್ಕ್ ಹ್ಯಾಂಡ್ ರೆಡಿಮೇಡ್ ಇದರ ಉದ್ಯೋಗಿ ಹಾಗೂ ಶ್ರೀ ಕೃಷ್ಣ ಯುವಕ ಮಂಡಲ ಸೀಟಿಗುಡ್ಡೆ ಪುತ್ತೂರು ಇದರ ಅಧ್ಯಕ್ಷ ಬಿ. ರಾಜೀವ ಗೌಡ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದ ರೂವಾರಿಯಾದ ನವೀನ್ ಪುತ್ತೂರು ಅತಿಥಿಗಳಿಗೆ ಹೂ ನೀಡಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here