ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿನಿ  ನಿಧನ

0

ಪುತ್ತೂರು:ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ ಕೃತಿ ಕೆ.ಎ.(13ವ)ರವರು ಅನಾರೋಗ್ಯದಿಂದಾಗಿ ನ.10ರಂದು ನಿಧನರಾದ ಘಟನೆ ನಡೆದಿದೆ.
ಬನ್ನೂರಿನ ಸೇಡಿಯಾಪು ಕಂಜೂರು ನಿವಾಸಿಗಳಾದ ಆನಂದ ಕುಲಾಲ್ ಮತ್ತು ಪದ್ಮಾವತಿ ದಂಪತಿಯ ಪುತ್ರಿಯಾಗಿರುವ ಕೃತಿ ಮೂರ್‍ನಾಲ್ಕು ತಿಂಗಳಿನಿಂದ ಅನಾರೋಗ್ಯದಿಂದಿದ್ದರು.ಕಳೆದ ಗುರುವಾರ ಮಂಗಳೂರು ಕೊಲಾಸೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಮೃತರು ತಂದೆ ಆನಂದ ಕುಲಾಲ್, ತಾಯಿ ಪದ್ಮಾವತಿ, ಸಹೋದರನನ್ನು ಅಗಲಿದ್ದಾರೆ.
ಶಾಲೆಯಲ್ಲಿ ಸಂತಾಪ:

ಕೃತಿ ಕೆ.ಎ.ಅವರ ನಿಧನಕ್ಕೆ ಶ್ರೀ ರಾಮಕೃಷ್ಣ ಶಾಲೆಯಲ್ಲಿ ಒಂದು ನಿಮಿಷ ಮೌನಪ್ರಾರ್ಥನೆ ಸಲ್ಲಿಸಿ ಸಂತಾಪ ಸೂಚಿಸಿ ಬಳಿಕ ಶಾಲೆಗೆ ರಜೆ ಸಾರಲಾಯಿತು.ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಮೃತ ವಿದ್ಯಾರ್ಥಿನಿಯ ಮನೆಗೆ ತೆರಳಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here