ಸಿರಿ ಕಡಮಜಲು ಕೃಷಿ ಕ್ಷೇತ್ರದಲ್ಲಿ ಎಸಿಎಫ್ ಹಸ್ತಾ ಶೆಟ್ಟಿ ಯವರಿಗೆ ಸನ್ಮಾನ

0

ಪುತ್ತೂರು: ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಒಳಮೊಗ್ರು ಗ್ರಾಮ ಕುಂಬ್ರ ಪರಿಸರದ ನಿವಾಸಿ, ಕುಂಬ್ರ ವಲಯದ ಕಟ್ಟಡ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಮುಡಾಲ ಪುರಂದರ ಶೆಟ್ಟಿಯವರ ಪುತ್ರಿ ಪ್ರಸ್ತುತ ಕುಂದಾಪುರದಲ್ಲಿ ಸಹಾಯಕ ಅರಣ್ಯ ಸಂರಕ್ಷಣ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಸ್ತಾ ಶೆಟ್ಟಿಯವರನ್ನು ಶಾಲು ,ಹಾರ, ಫಲವನ್ನು ನೀಡಿ ಕಡಮಜಲು ಸುಭಾಷ್‌ ರೈ ದಂಪತಿಗಳು ಸನ್ಮಾನಿಸಿದರು.

ಎಸಿಎಫ್ ಹಸ್ತಾರವರು ನಮ್ಮ ಊರಿನ ಪ್ರಜ್ಞಾವಂತ ಶ್ರೇಷ್ಠ ಪ್ರತಿಭೆ. ಬಾಲ್ಯದಲ್ಲಿ ಪ್ರತಿಭಾನ್ವಿತಳಾದ ಹಸ್ತಾ ಕರ್ನಾಟಕ ಸರಕಾರಿ ಅರಣ್ಯ ಇಲಾಖೆಯಲ್ಲಿ ಎತ್ತರದ ಸ್ಥಾನದ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸಿಕ್ಕಿದ ಅವಕಾಶ ನಮ್ಮ ಊರಿಗೆ ಗೌರವ ತಂದಿದೆ. ಅಧಿಕಾರಿಯಾಗಿ ಭ್ರಷ್ಟಚಾರ ರಹಿತ ಸೇವೆ ಸಮಾಜಕ್ಕೆ ಸಿಗಲೆಂದು ಹೇಳಿ ಸನ್ಮಾನಿಸಿ ಕಡಮಜಲು ಸುಭಾಸ್ ರೈ ಶುಭ ಹಾರೈಸಿದರು. ಈ ಸಂದರ್ಭ ಹಸ್ತಾರವರ ತಂದೆ ಪುರಂದರ ಶೆಟ್ಟಿ ಮುಡಾಲ, ವಿಂದ್ಯಾ ದುರ್ಗಾಪ್ರಸಾದ್‌ ಬೆಂಗಳೂರು, ನಿತಾಯ್ ಕೃಷ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here