ಬಿಳಿನೆಲೆ: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

0

ಬಿಳಿನೆಲೆ: ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿ ಕಾಡಿಗೆ ಹೋಗಿ ವಿಷ ಪದಾರ್ಥ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದಿಂದ ವರದಿಯಾಗಿದೆ. ಬಿಳೆನೆ ಗ್ರಾಮದ ಕಾಳಪ್ಪಾಡಿ ಹುಕ್ರಪ್ಪ ಗೌಡ ಅವರ ಮಗ ತಿಲೇಶ್ ಯಾನೆ ತುಕರಾಮ(50ವ) ಮೃತಪಟ್ಟವರು.

ಪತ್ನಿಯೊಂದಿಗೆ ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಿ ಮನೆಯಿಂದ ಹೊರ ಹೋದವರು ಮನೆಗೆ ಮರಳಿ ಬರಲಿಲ್ಲ. ತಡವಾಗಿ ಹುಡುಕಾಡಿದಾಗ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಕಾಡಿನಲ್ಲಿ ಮೃತದೇಹ ಪತ್ತೆಯಾಗಿದೆ. ಕಾಡಿನಲ್ಲಿ ಯಾವುದೋ ವಿಷಪದಾರ್ಥವನ್ನು ಸೇವಿಸಿ ಮೃತಪಟ್ಟಿರುವುದಾಗಿ ಕುಕ್ಕಾಜೆ ಮನೆಯ ರಾಘವೇಂದ್ರ ಡಿ.ಎಸ್ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here