ಬೆಳ್ಳಿಪ್ಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಡಿ. ಕೊರಗಪ್ಪ ಗೌಡ ದೇವಶ್ಯ ಆಯ್ಕೆ

0

ಪುತ್ತೂರು: ಬೆಳ್ಳಿಪ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ ಬಾಳಪ್ಪ ಗೌಡರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನ. 30ರಂದು ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಡಿ. ಕೊರಗಪ್ಪ ಗೌಡ ದೇವಶ್ಯರವರು ಅವಿರೋಧವಾಗಿ ಚುನಾಯಿತರಾದರು.


ಕೋಡಿಂಬಾಡಿ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರಾಗಿರುವ ಇವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ಳಿಪ್ಪಾಡಿ ಒಕ್ಕೂಟದ ಅಧ್ಯಕ್ಷರಾಗಿ, ಒಕ್ಕಲಿಗ ಸ್ವಸಹಾಯ ಸಂಘದ ಬೆಳ್ಳಿಪ್ಪಾಡಿ ಒಕ್ಕೂಟದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ವಿವಿಧ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ.

ಚುನಾವಣಾಧಿಕಾರಿಯಾಗಿ ಶ್ರೀಮತಿ ಶೋಭಾ, ಮಾರಾಟ ಅಧಿಕಾರಿ, ಸಹಕಾರಿ ಸಂಘಗಳ ನಿಬಂಧಕರ ಕಛೇರಿ ಪುತ್ತೂರು, ಸಂಘದ ಕಾರ್ಯದರ್ಶಿ ಮನೋಹರ .ಡಿ .ವಿ ಮತ್ತು ಹಾಲು ಪರೀಕ್ಷಕಿ ತುಳಸಿ, ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು. ಉಪಾಧ್ಯಕ್ಷ ಪದ್ಮನಾಭ ಗೌಡ ಕೂಟೇಲು ಮತ್ತು ನಿರ್ದೇಶಕರುಗಳಾದ ಬಾಳಪ್ಪ ಗೌಡ ಮೊಲುವೇಳು, ವಸಂತ ಗೌಡ ಪೋಲ್ಯ, ಅಣ್ಣು ಶೆಟ್ಟಿ ಕೈಪ, ನಾಗರಾಜ ಗೌಡ ತೆಂಕಪ್ಪಾಡಿ, ವಿನೀತಾ ವೇಗಸ್‌ಕೊಡೀಲು, ಪ್ರಮೀಳಾ ಪಕ್ಕಳ ಕುಂಡಾಪು, ಚೇತನ ವಿ.ಕೆ ಕೈಲಾಜೆ, ಸೀತಾ ಅಣ್ಣು ಗೌಡ ಕೋಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here