ರಾಷ್ಟ್ರೀಯ ಯೋಗ ಕ್ರೀಡಾಕೂಟದ ಪದಕ ವಿಜೇತರಿಗೆ ಬೆಂಗಳೂರು ರಾಜಭವನದಲ್ಲಿ ನಗದು, ಪ್ರಶಸ್ತಿ ಪ್ರದಾನ- ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದ ಪ್ರಣಮ್ಯ ಅಗಳಿ

0

ಕಾಣಿಯೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೆಂಗಳೂರಿನ ರಾಜಭವನದಲ್ಲಿ 2022ನೇ ಸಾಲಿನ 36 ನೇ ರಾಷ್ಟ್ರೀಯ ಯೋಗ ಕ್ರೀಡಾಕೂಟದ ಪದಕ ವಿಜೇತೆ ಪ್ರಣಮ್ಯ ಅಗಳಿಯವರಿಗೆ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಪುಷ್ಪಗುಚ್ಛ ನೀಡಿ ಪದಕ ತೊಡಿಸಿ ನಗದು ಪುರಸ್ಕಾರ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಕ್ರೀಡಾ ಸಚಿವರಾದ ಕೆ. ಸಿ. ನಾರಾಯಣ ಗೌಡ ಸೇರಿದಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್ ಹಲವಾರು ಸಚಿವರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಯೋಗದಲ್ಲಿ ಸಾಧನೆಯನ್ನು ಮಾಡಿರುವ ಪ್ರಣಮ್ಯ, ಎಳೆಯ ವಯಸ್ಸಿನಲ್ಲಿಯೇ ಯೋಗ ಸಾಧನೆಯ ಶಿಖರವನ್ನೇರಿ ಸುಮಾರು 25 ಬಾರಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ವಿಜೇತರಾಗಿ ಹಲವಾರು ದಾಖಲೆಗಳನ್ನು ಗಿಟ್ಟಿಸಿಕೊಂಡು 250ಕ್ಕಿಂತಲೂ ಹೆಚ್ಚಿನ ಪ್ರಶಸ್ತಿ ಫಲಕ ಪಡೆದಿರುವ ಇವರು ಪುತ್ತೂರು ಅಕ್ಷಯ ಕಾಲೇಜಿನ ವಿದ್ಯಾರ್ಥಿನಿ. ರಾಷ್ಟ್ರೀಯ ಯೋಗ ಸಾಧಕರಾದ ಚಂದ್ರಹಾಸ್ ಗೌಡ ಎ. ಪಿ ಹಾಗೂ ಹೇಮಾಚಂದ್ರಹಾಸ್ ರವರ ಪುತ್ರಿ.

LEAVE A REPLY

Please enter your comment!
Please enter your name here