ಪುತ್ತೂರು ರಾಜ್ ಜ್ಯುವೆಲ್ಲರ‍್ಸ್‌ನ ರಾಜ್ ಬೆನಿಫಿಟ್ಸ್-2 ಡ್ರಾ, ಬಹುಮಾನ ವಿತರಣೆ

0

ಪುತ್ತೂರು: ಕೋರ್ಟ್ ರಸ್ತೆಯ ಡಿಸೈನರ್ ಕಾಂಪ್ಲೆಕ್ಸ್‌ನಲ್ಲಿ ಕಳೆದ 26 ವರ್ಷಗಳಿಂದ ವ್ಯವಹರಿಸುತ್ತಿರುವ ರಾಜ್ ಜ್ಯುವೆಲ್ಲರ‍್ಸ್‌ನ ರಾಜ್ ಬೆನಿಫಿಟ್ಸ್-2 ಇದರ ಪ್ರಥಮ ಡ್ರಾ ಕಾರ್ಯಕ್ರಮ ದ.5 ರಂದು ನಡೆಯಿತು. ಭಾರತ ಸೇನೆಯ ನಿವೃತ್ತ ಯೋಧ ಪ್ರಸನ್ನ ಕುಮಾರ್ ಬಲ್ನಾಡುರವರು ಚೀಟಿ ಎತ್ತುವ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು. ಇದರಲ್ಲಿ ಅಶ್ವಿತ್ ಕೈಪಂಗಳ, ವಿನೋದ್ ನೆಹರುನಗರ, ಪ್ರಜ್ವಲ್ ಜಿ.ಡಿ ಪಂಜ ಡ್ರಾ ವಿಜೇತರಾದರು.

ದೀಪಾವಳಿ ಪ್ರಯುಕ್ತ ವಿಶೇಷ ಏರ್ಪಡಿಸಲಾಗಿದ್ದ ಲಕ್ಕಿ ಕೂಪನ್‌ನಲ್ಲಿ ಪ್ರಥಮ ಲೋಕೇಶ್, ದ್ವಿತೀಯ ಭುವನೇಶ್ವರಿ ಆರ್, ತೃತೀಯ ದಕ್ಷ ನಿಂತಿಕಲ್ಲು ಬಹುಮಾನ ಪಡೆದುಕೊಂಡರು. ವಿಜೇತರಿಗೆ ನೆಹರುನಗರ ನಿವಾಸಿ ನಿವೃತ್ತ ಸೇನಾಧಿಕಾರಿ ಸುರೇಶ್‌ರವರು ಚಿನ್ನಾಭರಣ ನೀಡಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ರಾಜಶೇಖರ್ ಎಸ್.ಆಚಾರ್ಯ, ರೇಖಾ, ರಿತ್ವಿಕ್ ಆಚಾರ್ಯ, ಸಿಬ್ಬಂದಿಗಳಾದ ಅಶ್ಮಿತಾ, ಸ್ವಾತಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here