ಕೊಂಬೆಟ್ಟಿನಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನ

0


ಪುತ್ತೂರು: ಬೂತ್ ವಿಜಯ ಅಭಿಯಾನದ ಅಂಗವಾಗಿ ಜ.8 ರಂದು ಬೆಳಿಗ್ಗೆ ಬಿಜೆಪಿ ನಗರ ಮಂಡಲ ವ್ಯಾಪ್ತಿಯ ಕೊಂಬೆಟ್ಟು ಬೂತ್ ಸಂಖ್ಯೆ 128 ರಲ್ಲಿ ಬೂತ್ ಉಪಾಧ್ಯಕ್ಷ ಗಣೇಶ ಬಾಳಿಗ  ಅವರ ಮನೆಯಲ್ಲಿ ಪಕ್ಷದ ಧ್ವಜವನ್ನು ಹಾರಿಸುವುದರ ಮೂಲಕ ಆಚರಿಸಲಾಯಿತು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಬೂತ್ ಉಪಾಧ್ಯಕ್ಷ ಗಣೇಶ್ ಬಾಳಿಗ ಅವರಿಗೆ ಪಕ್ಷದ ಧ್ವಜ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಪದ್ಯಾಣ ಶಂಕರನಾರಾಯಣ ಭಟ್, ಭಾಮಿ ಪದ್ಮನಾಭ ಶೆಣೈ, ಇಂಜಿನಿಯರ್ ರಾಮಚಂದ್ರ ಘಾಟೆ, ಮನೋಹರ್ ರಾಜ ಪುರೋಹಿತ್ , ಸ್ಮಿತಾ ಬಾಳಿಗ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here