ಬನ್ನೂರು ನಿವಾಸಿ ಶೇಖ್ ಖಾಸಿಂ ಸಾಹೇಬ್ ಹೃದಯಾಘಾತದಿಂದ ನಿಧನ

0

ಪುತ್ತೂರು: ನೆಲ್ಲಿಕಟ್ಟೆ ದಿ.ಶೇಖ್ ಹಸನ್ ಸಾಹೇಬ್ ಅವರ ಪುತ್ರ ಬನ್ನೂರು ನಿವಾಸಿ ಆರ್‌ಟಿಒ ಕಚೇರಿಯಲ್ಲಿ ವಿವಿಧ ಕೆಲಸ ಕಾರ್ಯ ನಿರ್ವಹಿಸುತ್ತಿದ್ದ ಶೇಖ್ ಖಾಸಿಂ ಸಾಹೇಬ್(60ವ)ರವರು ಜ.7ರಂದು ಸಂಜೆ ಹೃದಯಾಘಾತದಿಂದ ನಿಧನರಾದರು.
ಖಾಸಿಂ ಸಾಹೇಬ್ ಅವರಿಗೆ ಸಂಜೆ ಎದೆ ನೋವು ಬಂದ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಮತ್ತು ಪುತ್ರಿ, ಸಹೋದರರಾದ ಕಾರ್ಕೋಟಕ ಶೇಖ್ ಇಸಾಕ್, ಸುದ್ದಿ ಬಿಡುಗಡೆ ಪತ್ರಿಕೆ ಹಿರಿಯ ವರದಿಗಾರ ಶೇಖ್ ಜೈನುದ್ದೀನ್, ಅಬ್ದುಲ್ ರಜಾಕ್, ಯಯ್ಯ ಮತ್ತು ಐವರು ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here