ಮುಂಡೂರು ಕಂಪ ಬದಿಯಡ್ಕದಲ್ಲಿ ಚೂರಿ ಇರಿತ- ಯುವತಿ ಮೃತ್ಯು

0

 

ಪುತ್ತೂರು: ಮುಂಡೂರು ಗ್ರಾಮದ ಕಂಪ ಬದಿಯಡ್ಕದಲ್ಲಿ ಮನೆಯೊಳಗಿದ್ದ ಯುವತಿಯೋರ್ವರು ಚೂರಿ ಇರಿತದಿಂದಾಗಿ ಮೃತಪಟ್ಟ ಘಟನೆ ಜ.17 ರಂದು ನಡೆದಿದೆ.

ಮುಂಡೂರು ಗ್ರಾಮದ ಕಂಪ ಬದಿಯಡ್ಕ ದಿ.ಗುರುವ ಎಂಬವರ ಪುತ್ರಿ ಜಯಶ್ರೀ(23ವ) ರವರು ಮೃತಪಟ್ಟವರು. ಅವರು ಮನೆಯೊಳಗೆ ಇದ್ದ ವೇಳೆ ಚೂರಿ ಇರಿತಕ್ಕೊಳಗಾಗಿದ್ದಾರೆ. ಚೂರಿ ಇರಿತ ಮಾಡಿದವರು ಯಾರು ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಾಗಿದೆ.

ಘಟನೆ ವಿವರ:

ಜಯಶ್ರೀ ಅವರ ತಾಯಿ ಬೆಳಿಗ್ಗೆ ತೋಟಕ್ಕೆ ತೆರಳಿದ್ದರು. ಇತ್ತ ತಮ್ಮ ಮಂಗಳೂರಿಗೆ ಫ್ಯಾಶನ್ ಡಿಸೈನ್ ಗೆ ತೆರಳಿದ್ದರು. ಮನೆಯಲ್ಲಿ ಜಯಶ್ರೀ ಒಬ್ಬಾಕೆ ಮಾತ್ರ ಇದ್ದರು. ಇದೇ ವೇಳೆ ಅವರಿಗೆ ಚೂರಿ ಇರಿತ ಆಗಿದೆ. ಚೂರಿ ಇರಿತಕ್ಕೊಳಗಾದ ಜಯಶ್ರೀ ಹೊಟ್ಟೆಯಲ್ಲಿ ಚುಚ್ಚಿದ ಚೂರಿ ಸಹಿತ ಕಿರುಚಾಡಿಕೊಂಡು ತೋಟದ ಕಡೆ ಬಂದಿದ್ದರೆನ್ನಲಾಗಿದೆ. ತಾಯಿ ಕೂಡ ಮಗಳ ಕಿರುಚಾಟವನ್ನು ಕೇಳಿ‌ಮನೆ ಕಡೆ ಹೋಗಿದ್ದಾರೆ. ಈ ವೇಳೆಗಾಗಲೇ ಸ್ಥಳೀಯರು‌ ಕೂಡಾ ಬಂದು ಆಕೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದಾರಿ ಮಧ್ಯೆಯೇ ಜಯಶ್ರೀ ಮೃತಪಟ್ಟಿದ್ದಾರೆ. ಘಟ‌ನೆಗೆ ಸಂಬಂಧಿಸಿ ಪುತ್ತೂರು ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್, ಎಸ್ಐ ಉದಯ ರವಿ ಆಸ್ಪತ್ರೆಗೆ ತೆರಳಿ ಮೃತ ಜಯಶ್ರೀ ತಾಯಿಯಿಂದ ಹೇಳಿಕೆ ಪಡೆದು ಕೊಂಡಿದ್ದಾರೆ.

3 ಬಾರಿ ಚುಚ್ಚಿದ ಗುರುತು !

ಮೃತ ಜಯಶ್ರೀಯರವ ಹೊಟ್ಟೆಯಲ್ಲಿ ಮೂರು ಬಾರಿ ಚೂರಿಯಿಂದ ಚುಚ್ಚಿದ ಗುರುತು ಮೆಲ್ನೋಟಕ್ಕೆ ಕಾಣುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ‌

 

LEAVE A REPLY

Please enter your comment!
Please enter your name here