ಜ.20ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೈವಜ್ಞರು ಸೂಚಿಸಿದನ್ನು ಅನುಷ್ಠಾನಗೊಳಿಸುವ ಸಭೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ದೈವಜ್ಞರು ಸೂಚಿಸಿರುವ ವಿಷಯಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ದೈವಜ್ಞರು ತಂತ್ರಿಗಳು ವಾಸ್ತುತಜ್ಞರ ಜೊತೆ ಚಿಂತನೆ ನಡೆಸಲಿದ್ದು, ಈ ಕುರಿತು ಜ.20ರಂದು ದೇವಳದ ಸಭಾಂಗಣದಲ್ಲಿ ಭಕ್ತಾದಿಗಳ ಸಭೆ ನಡೆಯಲಿದೆ.

ಸಭೆಯು ಬೆಳಿಗ್ಗೆ ಗಂಟೆ 9:30ರಿಂದ ಆರಂಭಗೊಳ್ಳಲಿದ್ದು, ಸಂಜೆ ಗಂಟೆ 4ಕ್ಕೆ ಅಷ್ಟಮಂಗಲ ಪ್ರಶ್ನಾ ಚಿಂತನೆಯ ನಿವೃತ್ತಿ ಕಾರ್ಯ ಪರಿಸಮಾಪ್ತಿ ಮತ್ತು ಸೂಚನೆ ಅನುಷ್ಟಾನ ನಡೆಯಲಿದ್ದು, ಇದರ ಅಂಗವಾಗಿ ದೈವಜ್ಞರು ತಂತ್ರಿಗಳು ಹಾಗೂ ವಿಪ್ರರಿಂದ ’ಅನುಗ್ರಹ ಮಂತ್ರಾಕ್ಷತೆ’ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಸಮಿತಿ ಸದಸ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here