ದಿನೇಶ್ ಭವನ, ಬಾರ್ & ರೆಸ್ಟೋರೆಂಟ್ ಮಾಲಕ ಬಳ್ಳಿಕಾನ ನಾರಾಯಣ ರೈ ನಿಧನ

0

ಪುತ್ತೂರು: ಪ್ರತಿಷ್ಠಿತ ದಿನೇಶ್ ಭವನ ವಸತಿಗೃಹ ಮತ್ತು ದಿನೇಶ್ ಬಾರ್ ಆಂಡ್ ರೆಸ್ಟೋರೆಂಟ್‌ನ ಮಾಲಕ ಬಳ್ಳಿಕಾನ ನಾರಾಯಣ ರೈ(೯೯ವ.)ಯವರು ಜ.೨೦ರಂದು ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಅರಿಯಡ್ಕ ಗ್ರಾಮದ ಬಳ್ಳಿಕಾನ ಎಸ್ಟೇಟ್ ಮಾಲಕರೂ ಆಗಿದ್ದ ನಾರಾಯಣ ರೈಯವರು ಆರೋಗ್ಯದಿಂದಿದ್ದವರು ಬೆಳಿಗ್ಗೆ ಪುತ್ತೂರಿಗೆ ಹೊರಡುತ್ತಿದ್ದ ವೇಳೆ ದಿಢೀರ್ ಅಸ್ವಸ್ಥಗೊಂಡರು.ಬಳಿಕ ಅವರನ್ನು ಇಲ್ಲಿನ ಧನ್ವಂತರಿ ಆಸ್ಪತ್ರೆಗೆ ಕರೆತರಲಾಗಿತ್ತು.ಚಿಕಿತ್ಸೆಗೆ ಸ್ಪಂದಿಸದೆ ಅವರು ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಉದ್ಯಮದ ಜೊತೆ ಕೃಷಿ ಕ್ಷೇತ್ರದಲ್ಲಿ ಅದ್ಭುತ ಪ್ರಯೋಗಗಳನ್ನು ಮಾಡಿ ಯಶಸ್ಸು ಸಾಧಿಸಿದ್ದ ನಾರಾಯಣ ರೈಯವರ ಬಳ್ಳಿಕಾನ ಎಸ್ಟೇಟ್ ವಿಭಿನ್ನ ರೀತಿಯ ಕೃಷಿ ಚಟುವಟಿಕೆಗಳೊಂದಿಗೆ ನಾಡಿನೆಲ್ಲೆಡೆ ಖ್ಯಾತಿ ಹೊಂದಿದೆ.ಮೃತ ನಾರಾಯಣ ರೈಯವರು ಉದ್ಯಮಿ, ಪ್ರಗತಿಪರ ಕೃಷಿಕರೂ ಆಗಿರುವ ಪುತ್ರ ರಮೇಶ್ ರೈಯವರನ್ನು ಅಗಲಿದ್ದಾರೆ.
ಇಂದು ಅಂತ್ಯಕ್ರಿಯೆ:
ಮೃತ ನಾರಾಯಣ ರೈಯವರ ಅಂತ್ಯಕ್ರಿಯೆ ಜ.೨೧ರಂದು ಬಳ್ಳಿಕಾನ ಎಸ್ಟೇಟ್‌ನಲ್ಲಿ ನಡೆಯಲಿದೆ.ಅವರ ಮೃತದೇಹ ಪುತ್ತೂರು ಸಿಟಿ ಆಸ್ಪತ್ರೆಯ ಶವಾಗಾರದಲ್ಲಿದ್ದು ಜ.೨೧ರಂದು ಬೆಳಿಗ್ಗೆ ೧೦.೩೦ಕ್ಕೆ ಮೃತದೇಹವನ್ನು ಬಳ್ಳಿಕಾನ ಎಸ್ಟೇಟ್‌ಗೆ ಕೊಂಡೊಯ್ಯಲಾಗುವುದು ಎಂದು ಮೃತರ ಕುಟುಂಬ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here