ಜ.31: ವಿಟ್ಲ ಬಸ್‌ನಿಲ್ದಾಣದ ಸಂಚಾರ ನಿಯಂತ್ರಕ ಕೆ. ರಾಮಣ್ಣ ಶೆಟ್ಟಿ ಕರ್ತವ್ಯದಿಂದ ನಿವೃತ್ತಿ

0

ಪುತ್ತೂರು: ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ಬಿ.ಸಿ.ರೋಡು ಘಟಕದ ವಿಟ್ಲ ಬಸ್‌ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿರುವ ಕೆ. ರಾಮಣ್ಣ ಶೆಟ್ಟಿರವರು ಜ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ. 1985ರಲ್ಲಿ ಬೆಂಗಳೂರಿನ ಕುಣಿಗಲ್‌ನಲ್ಲಿ ಸೇವೆಗೆ ಸೇರಿದ್ದ ಇವರು ಬಳಿಕ ಮಂಗಳೂರು ವಿಭಾಗ ಮತ್ತು ಪುತ್ತೂರು ವಿಭಾಗದಲ್ಲಿ ಒಟ್ಟು 37 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದಾರೆ. ಮೂಲತಃ ಉಪ್ಪಿನಂಗಡಿ ಕೆಮ್ಮಾರಗುತ್ತು ನಿವಾಸಿಯದ ಇವರು ಪ್ರಸ್ತುತ ವಿಟ್ಲ ಕಸಬ ಚಂದಳಿಕೆ ನಿಡ್ಯದಲ್ಲಿ ಪತ್ನಿ ಸುಜಾತ ಆರ್. ಶೆಟ್ಟಿ, ಪುತ್ರಿಯರಾದ ಹಿತಾಶ್ರೀ, ಜೀವಿತಾಶ್ರೀರವರೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here