ನೀರ್ಕಜೆ ಗಣಪತಿ ಭಟ್ ನಿಧನ

0

ವಿಟ್ಲ: ಪುಣಚ ಗ್ರಾಮದ ನೀರ್ಕಜೆ ನಿವಾಸಿ, ಪುಣಚ ದೇವಿನಗರ ಶ್ರೀದೇವಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ನೀರ್ಕಜೆ ಗಣಪತಿ ಭಟ್(72ವ.) ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ದೇವಿನಗರ ಶ್ರೀದೇವಿ ಪ್ರೌಢಶಾಲೆಯಲ್ಲಿ 27 ವರ್ಷಗಳ ಕಾಲ ಹಿಂದಿ ಶಿಕ್ಷಕರಾಗಿದ್ದರು. 2008ರಲ್ಲಿ ನಿವೃತ್ತರಾದ ಬಳಿಕ ಕೃಷಿ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಶಿಕ್ಷಕ ವೃತ್ತಿಯಲ್ಲದೇ ರಂಗಭೂಮಿಯ ಉತ್ತಮ ಹಾಸ್ಯ ಕಲಾವಿದ, ನಿರ್ದೇಶಕರಾಗಿದ್ದ ಇವರು ’ಭೋಜಣ್ಣ’ ಎಂದೇ ಜನಜನಿತರಾಗಿದ್ದರು. ಮೃತರು ಪತ್ನಿ, ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here