ಅಕ್ಷಯ ರೈ ದಂಬೆಕ್ಕಾನ ಪರಿಕಲ್ಪನೆಯ ಹರ್ ಗರ್ ಗಂಗಾ ಕಿರುಚಿತ್ರದ ಚಿತ್ರೀಕರಣ ಆರಂಭ

0

ಪುತ್ತೂರು : ಅಕ್ಷಯ ರೈ ದಂಬೆಕ್ಕಾನ ಪರಿಕಲ್ಪನೆಯ ಹರ್ ಗರ್ ಗಂಗಾ ಮತ್ತು ಸಾವಯವ ಕೃಷಿ ಬಗ್ಗೆ ಮಾಹಿತಿ ಇರುವ ಕಿರು ಚಿತ್ರವನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಬಾಲೇನಹಳ್ಳಿ ಗ್ರಾಮದಲ್ಲಿ ಚಿತ್ರೀಕರಣ ಮಾಡಲಾಯಿತು. ಚಿತ್ರೀಕರಣದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಕೆ ಎಸ್ ನವೀನ್ ರವರು ಮಾಡಿದರು.

ಅಕ್ಷಯ ರೈ ದಂಬೆಕ್ಕಾನ ಅವರ ಪರಿಕಲ್ಪನೆ, ರತನ್ ರಮೇಶ್ ಪೂಜಾರಿ ಅವರ ನಿರ್ದೇಶನದಲ್ಲಿ ಮತ್ತು ವೈಭವ ಕುಮಾರ್ ರವರ ಛಾಯಾಗ್ರಾಹಣದಲ್ಲಿ ಈ ಚಿತ್ರವು ಮೂಡಿಬರಲಿದೆ, ಈ ಚಿತ್ರದಲ್ಲಿ ಕೃಷಿ ಸಚಿವರು ಹಾಗೂ ನೀರಾವರಿ ಸಚಿವರು ವಿವಿಧ ಯೋಜನೆಗಳ ಬಗ್ಗೆ ಮಾತನಾಡಲಿದ್ದಾರೆ.

ಈ ಸಂದರ್ಭದಲ್ಲಿ ಚಿತ್ರದುರ್ಗ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಲುವೇಹಳ್ಳಿ ಆರ್ ಪಾಲಯ್ಯ, ಹಿರಿಯೂರು ಯುವ ಮೋರ್ಚಾ ಮಂಡಲ ಅಧ್ಯಕ್ಷ ಹರೀಶ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸಂತ್ ಹಾಗೂ ಕಿರು ಚಿತ್ರದ ಪಾತ್ರಧಾರಿಗಳು, ಹೇಮಂತ್ ರಾಜ್, ಕಾಂತರಾಜ್, ವೆಂಕಟೇಶ್, ಗೋವಿಂದಪ್ಪ, ಕಾಂತಣ್ಣ ಜಗದೀಶ್ , ಆದರ್ಶ ಕೆಯ್ಯೂರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here