ಪುತ್ತೂರು ಮಹಾದೇವನ ಜಾತ್ರೆಗೆ ಹರಿದು ಬಂದ ಹಸಿರುವಾಣಿ

0

  • ಕಾಯಕ ಯೋಗಿ ಮಾಣಿಲ ಶ್ರೀ ಉಪಸ್ಥಿತಿಯಲ್ಲಿ ಹಸಿರುವಾಣಿ ಸಮರ್ಪಣೆ
  • ಶ್ರದ್ಧೆ, ಭಕ್ತಿಯ ಮಾರ್ಗಕ್ಕೆ ಯಶಸ್ಸು – ಮಾಣಿಲ ಶ್ರೀ

                         
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.10ರಿಂದ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಎ.9ರಂದು ಹಸಿರುವಾಣಿ ಸಮರ್ಪಣೆ ಮೆರವಣಿಗೆ ಮೂಲಕ ಚೆಂಡೆವಾದನ, ಗೊಂಬೆ ನೃತ್ಯದೊಂದಿಗೆ ನಡೆಯಿತು.

ಸಂಜೆ ವಿವಿಧ ಗ್ರಾಮ, ಸೀಮೆಗಳಿಂದ ವಾಹನಗಳಲ್ಲಿ ಬಂದ ಹಸಿರುವಾಣಿಯು ದರ್ಬೆ ಮತ್ತು ಬೊಳುವಾರಿನಲ್ಲಿ ಸೇರಿಸಿ ಅಲ್ಲಿಂದ ಏಕಕಾಲದಲ್ಲಿ ಹಸಿರುವಾಣಿ ಮೆರವಣಿಗೆ ನಡೆಯಿತು. ದರ್ಬೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬೊಳುವಾರು ಓಂ ಶ್ರೀ ಶಕ್ತಿ ಅಂಜನೇಯ ಮಂತ್ರಾಲಯದ ಬಳಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಹಸಿರುವಾಣಿ ಮೆರಣಿಗೆಗೆ ಚಾಲನೆ ನೀಡಿದರು. ದೇವಳದ ಬಳಿಯ ಪ್ರಧಾನ ಅಂಚೆಕಚೇರಿ ಬಳಿ ಎರಡು ಕಡೆಯಿಂದ ಬಂದ ಹಸಿರುವಾಣಿ ಮೆರವಣಿಗೆ ಜೊತೆಯಾಗಿ ಸೇರಿಕೊಂಡು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿಯಲ್ಲಿ ದೇವಸ್ಥಾನಕ್ಕೆ ತರಲಾಯಿತು. ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಹಸಿರುವಾಣಿ ಇಟ್ಟು ಪ್ರಾರ್ಥನೆ ಮಾಡಿ ಬಳಿಕ ಹೊರೆಕಾಣಿಕೆಯನ್ನು ಉಗ್ರಾಣಕ್ಕೆ ತರಲಾಯಿತು. ಉಗ್ರಾಣ ಮುಹೂರ್ತಕ್ಕೆ ಶ್ರೀಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ, ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮದಾಸ್ ಗೌಡ ಮತ್ತು ಪ್ರಧಾನ ಅರ್ಚಕರೂ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವೇ ಮೂ ವಿ.ಎಸ್ ಭಟ್, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಜಾತ್ರೋತ್ಸವದ ವಿವಿಧ ಉಪಸಮಿತಿಗಳ ಸದಸ್ಯರಾದ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಕೃಷ್ಣಪ್ರಸಾದ್ ಆಳ್ವ, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಯು.ಪಿ.ರಾಮಕೃಷ್ಣ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಪಟ್ಲ ಪೌಂಡೇಶನ್‌ನ ಜಯರಾಜ್ ಭಂಡಾರಿ, ಪ್ರೇಮಲತಾ ರಾವ್, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ್ ರಾವ್, ಸುದೇಶ್ ಚಿಕ್ಕಪುತ್ತೂರು, ರಮೇಶ್ ರೈ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರದ್ಧೆ, ಭಕ್ತಿಯ ಮಾರ್ಗಕ್ಕೆ ಯಶಸ್ಸು:
ಹೊರೆಕಾಣಿಕೆ ಸಮರ್ಪಣೆಯ ಬಳಿಕ ದೇವಳದ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಗಳು ಅಶೀರ್ವಚನ ನೀಡಿದರು. ಆತ್ಮಶಕ್ತಿ, ಧೃಡತೆ, ಪ್ರೀತಿ, ಧೃಡವಾದ ನಂಬಿಕೆ, ಶ್ರದ್ಧತೆ, ಭಕ್ತಿಯ ಮಾರ್ಗಕ್ಕೆ ಯಶಸ್ಸು ಸದಾ ಸಿಗಲಿದೆ. ಮಹಾಲಿಂಗೇಶ್ವರ ದೇವರ ಜಾತ್ರೆ ಶ್ರದ್ಧಾ ಭಕ್ತಿಯಿಂದ ಉತ್ತಮವಾಗಿ ನಡೆಯಲಿದೆ ಎಂದರು.

LEAVE A REPLY

Please enter your comment!
Please enter your name here