ತಿಂಗಳಾಡಿ: ಬೈಕ್-ಟಿಪ್ಪರ್ ಅಪಘಾತ ಬೈಕ್ ಸವಾರನಿಗೆ ಗಾಯ

0

ಪುತ್ತೂರು: ಬೈಕ್ ಮತ್ತು ಟಿಪ್ಪರ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಮಾ.24 ರಂದು ತಿಂಗಳಾಡಿಯಲ್ಲಿ ನಡೆದಿದೆ. ಮಾಡಾವು ಬೊಳಿಕ್ಕಲಮಠ ನಿವಾಸಿ ಸುಜಿತ್ ರೈ ಎಂಬವರು ಮಾಡಾವುನಿಂದ ಕುಂಬ್ರಕ್ಕೆ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಮತ್ತು ಕುಂಬ್ರದಿಂದ ತಿಂಗಳಾಡಿ ಕಡೆಗೆ ಬರುತ್ತಿದ್ದ ಟಿಪ್ಪರ್ ಮಧ್ಯೆ ತಿಂಗಳಾಡಿ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸುಜಿತ್ ರೈಯವರು ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here