ಕೊನೆಮಜಲು ಗುತ್ತು: ಶ್ರೀ ದೇವಿ ಉಳ್ಳಾಲ್ತಿ ಉಳ್ಳಾಕುಲು, ಸಹ ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ರಾಮಕುಂಜ: ಕಡಬ ತಾಲೂಕು ಕೊಯಿಲ ಗ್ರಾಮದ ಕೊನೆಮಜಲುಗುತ್ತು ಶ್ರೀ ದೇವಿ ಉಳ್ಳಾಲ್ತಿ ಉಳ್ಳಾಕುಲು ಹಾಗೂ ಸಹ ಪರಿವಾರ ದೈವಗಳ ದೈವಸ್ಥಾನದಲ್ಲಿ 10ನೇ ವರ್ಷದ ಶ್ರೀ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಫೆ.2ರಂದು ಬೆಳಿಗ್ಗೆ ಬ್ರಹ್ಮಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಕೆಮ್ಮಿಂಜೆ ಹಾಗೂ ವೇದಮೂರ್ತಿ ವೆಂಕಟ್ರಮಣ ಕುದ್ರತ್ತಾಯರ ಉಪಸ್ಥಿತಿಯಲ್ಲಿ ವಿವಿಧ ದೇವತಾ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ನವಕಕಲಶ ತಂಬಿಲ, ಆಶ್ಲೇಷ ಬಲಿ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಆಡಳಿತ ಸಮಿತಿ ಅಧ್ಯಕ್ಷ ದಯಾನಂದ ದಾಸ್, ಕಾರ್ಯದರ್ಶಿ ಕೆ.ಸಂಜೀವ ಗೌಡ ಕೊನೆಮಜಲುಗುತ್ತು, ಸದಸ್ಯರಾದ ವಿನೋಧರ ಮಾಳ, ಬಾಲಕೃಷ್ಣ ಶೆಟ್ಟಿ, ರಾಮಣ್ಣ ಗೌಡ ಪಾಣಿಗ, ವಿಶ್ವನಾಥ ಗೌಡ ಕೊನೆಮಜಲು ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here