ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ-ಹಸಿರು ಹೊರೆ ಕಾಣಿಕೆ ಸಮರ್ಪಣೆ

0

ಕಡಬ: ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಫೆ.9ರಿಂದ ಫೆ.10ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಫೆ.9ರಂದು ಗ್ರಾಮಸ್ಥರು ಹಾಗೂ ಭಕ್ತವೃಂದದವರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ರವಿಪ್ರಸಾದ್ ಭಟ್, ಶ್ರೀ ಉಮಾಮಹೇಶ್ವರಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ರಾಮಚರಣ್ ರೈ ಕೆ. ಮಾಣಿಗ ಕಾರ್ಯದರ್ಶಿ ನಾರಾಯಣ ಎನ್. ಬಲ್ಯ ಕೊಲ್ಲಿಮಾರ್, ಶ್ರೀ ಉಮಾಮಹೇಶ್ವರಿ ಧಾಮಿಕ ಉತ್ಸವ ಸಮಿತಿಯ ಅಧ್ಯಕ್ಷ ದೇವಯ್ಯ ಪನ್ಯಾಡಿ ಕಾರ್ಯದರ್ಶಿ ಜನಾರ್ಧನ ಗೌಡ ಆರಿಗ, ಶ್ರೀ.ಉ.ಸೇ.ಟ್ರಸ್ಟ್‌ನ ಉಪಾಧ್ಯಕ್ಷೆ ದೇವಕಿ ಎಸ್. ಜತೆ ಕಾರ್ಯದರ್ಶಿ ಮೋಹನ ಡಿ.ವಿ ದೇರಾಜೆ, ಕೋಶಾಧಿಕಾರಿ ಎಂ.ಡಿ.ರಾಜರಾಂ ಭಟ್ ಹೊಸ್ಮಠ, ಸದಸ್ಯರಾದ ಸತೀಶ್ಚಂದ್ರ ಶೆಟ್ಟಿ ಬೀರುಕ್ಕು, ತಿಮ್ಮಪ್ಪ ಕರ್ಕೆರ ಮತ್ರಾಡಿ, ಕೃಷ್ಣಪ್ಪ ದೇವಾಡಿಗ ಸನಿಲ, ಶಾಂತರಾಮ್ ರೈ ಬೆದ್ರಾಡಿ ,ರಾಮಯ್ಯ ಗೌಡ ಬೈಲಡ್ಕೆ, ಸರಸ್ವತಿ ಆರ್ ರೈ ಪಟೆ, ಚಂದ್ರಶೇಖರ ಗೌಡ ಪಾತ್ತಾಜೆ, ಗೌರವ ಸಲಹೆಗಾರರಾದ ಹರೀಶ್ ಶೆಟ್ಟಿ ಮಾಣಿಗ, ಡಾ|ಸುರೇಶ್ ಕುಮಾರ್ ಕೂಡೂರು, ಪ್ರಮುಖರಾದ ಬಿ.ಎಂ ಪೂರ್ಣೇಶ ಗೌಡ ಬಾಬ್ಲುಬೆಟ್ಟು, ಜಗನ್ನಾಥ ಶೆಟ್ಟಿ ಗುಂಡಿಜಾಲು ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗ ಉತ್ಸವ ಸಮಿತಿ ಸದಸ್ಯರುಗಳು ಟ್ರಸ್ಟಿನ ಸದಸ್ಯರುಗಳು ಭಜನಾ ಮಂಡಳಿ ಸದಸ್ಯರು, ಬೈಲುವಾರು ಪ್ರತಿನಿಧಿಗಳು ಹಾಗೂ ಊರ ಪರವೂರ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here