ತುಕಾರಾಮ ಬಾಯಾರು ನಿರ್ದೇಶನದ ಸಿಲಿಕಾನ್ ಸಿಟಿ ಕಿರುಚಿತ್ರದ ಮುಹೂರ್ತ

0

ಪುತ್ತೂರು: ಬೀಟಾ ಪ್ರೊಡಕ್ಷನ್ ಬ್ಯಾನರ್‌ನಡಿಯಲ್ಲಿ ತಯಾರಾಗುವ “ಸಿಲಿಕಾನ್ ಸಿಟಿ” ಕನ್ನಡ ಕಿರುಚಿತ್ರದ ಮುಹೂರ್ತ ಫೆ.17ರಂದು ಬಾಯಾರು ಪೆರುವೊಡಿ ಸರವು ಶ್ರೀಕೊರಗಜ್ಜ ದೈವಸ್ಥಾನದಲ್ಲಿ ನಾರಾಯಣ ಬಾಯಾರುರವರ ಉಪಸ್ಥಿತಿಯಲ್ಲಿ ನಡೆಯಿತು.

ಚಿತ್ರದ ನಿರ್ದೇಶಕ ತುಕಾರಾಮ ಬಾಯಾರು, ನಾಯಕ ನಟ ಶರತ್‌ಚಂದ್ರ ಬಾಯಾರು, ನಾಯಕಿ ಗೌತಮಿ ಹಾಗೂ ಗಿರೀಶ್ ಸಾಲ್ಯಾನ್ ಮುಳಿಯ, ಪ್ರವೀಣ್ ಆಚಾರ್ಯ ಪುತ್ತೂರು, ಬಾಲಪ್ರತಿಭೆ ಚುಕ್ಕಿವಿಟ್ಲ, ಸಂಧ್ಯಾ ಮಂಗಿಲಪದವು, ಮಂಗಳಗೌರಿ ಭಟ್ ಸರವು, ಆಶಾಚಂದ್ರ ಸರವು, ಪ್ರವೀಣ್‌ಜಯ ವಿಟ್ಲ, ಕೃಷ್ಣ ಆಚಾರ್ಯ ಬಳ್ಳೂರು, ಧರ್ಮೇಂದ್ರ ಆಚಾರ್ಯ ಬಳ್ಳೂರು, ಶೈಲೇಶ್ ಆಚಾರ್ಯ ಪುತ್ತಿಗೆ, ಕಿರಣ್ ಆಚಾರ್ಯ ಪುತ್ತಿಗೆ ಉಪಸ್ಥಿತರಿದ್ದರು.

ಗಿರೀಶ್ ಸಾಲ್ಯಾನ್ ಮುಳಿಯ ಕಾರ್ಯಕ್ರಮ ಸಂಯೋಜಿಸಿ, ಕಿರಣ್ ಆಚಾರ್ಯ ಪುತ್ತಿಗೆ ನಿರೂಪಿಸಿದರು.

LEAVE A REPLY

Please enter your comment!
Please enter your name here