ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರಿಗೆ ಶಂಖ, ಗಂಧದ ಬಟ್ಟಲು, ಬೆಳ್ಳಿಯ ಸತ್ತಿಗೆ, ಬೆಳ್ಳಿಯ ಗುಬ್ಬಿ ಸಮರ್ಪಣೆ

0

ಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯು ಫೆ.16ರಿಂದ ಆರಂಭಗೊಂಡು ಫೆ.24ರವೆರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ರವೀಂದ್ರ ಮಾಣಿಲತ್ತಾಯ ಇವರಿಂದ ಬೆಳ್ಳಿಯ ಸತ್ತಿಗೆ, ಸಂದೀಪ್ ಕಾರಂತ ಈಶ್ವರಮಂಗಲ ಇವರಿಂದ ಶಂಖ ಮತ್ತು ಗಂಧದ ಬಟ್ಟಲು, ಶಿವಳ್ಳಿ ಸಂಪದ ಇವರಿಂದ ಬೆಳ್ಳಿಯ ಗುಬ್ಬಿಯನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕುಂಟಾರು ವಾಸುದೇವ ತಂತ್ರಿಗಳು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ, ಜೀರ್ಣೋದ್ಧಾರ ಸಮಿತಿ ಸದಸ್ಯರು, ಜಾತ್ರೋತ್ಸವ ಸಮಿತಿ ಸದಸ್ಯರು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here