ಪುತ್ತೂರು: ಫೆ.21- ಶ್ರೀ ಸತ್ಯಸಾಯಿ ಮಂದಿರ ವಠಾರದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

0

ಶ್ರೀ ಸತ್ಯಸಾಯಿ ಸೇವಾಸಮಿತಿ ಪುತ್ತೂರು, ದ.ಕ ಜಿಲ್ಲಾ ವೆನ್‌ಲಾಕ್‌ ಆಸ್ಪತ್ರೆ ಮಂಗಳೂರು ಮತ್ತು ಸರಕಾರಿ ಆಸ್ಪತ್ರೆ ಪುತ್ತೂರು ಸಹಯೋಗದಲ್ಲಿ ಫೆ.21ರಂದು ಮಂಗಳವಾರ ಪೂರ್ವಾಹ್ನ ಗಂಟೆ 9.30ರಿಂದ ಗಂಟೆ 1.30ರ ತನಕ ಶ್ರೀ ಸತ್ಯಸಾಯಿ ಮಂದಿರ ಪುತ್ತೂರು ವಠಾರದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಜರುಗಲಿದೆ.

ದಾಖಲಾತಿ ಅದೇ ದಿನ ಪೂರ್ವಾಹ್ನ ಗಂಟೆ 8.30ರಿಂದ ಗಂಟೆ 11.30ರ ತನಕ ನಡೆಯಲಿದೆ. ಈ ಪ್ರಯೋಜನ ಮೊದಲು ಬಂದ 250 ಮಂದಿಗೆ ಮಾತ್ರವಾಗಿದೆ.

ಲಭ್ಯ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುವುದು. ಕಣ್ಣಿ ಪೊರೆ ಶಸ್ತ್ರ ಚಿಕಿತ್ಸೆಯನ್ನು ಮಂಗಳೂರು ವೆನ್‌ ಲಾಕ್‌ ಆಸ್ಪತ್ರೆಯಲ್ಲಿ ನಡೆಸಲಾಗುವುದು. ಶಸ್ತ್ರ ಚಿಕಿತ್ಸೆಗೆ ಬರುವವರು ಆಧಾರ್‌ ಮತ್ತು ರೇಷನ್‌ ಕಾರ್ಡಿನ ಪ್ರತಿಯೊಂದಿಗೆ ಒಬ್ಬ ಸಹಾಯಕರೊಂದಿಗೆ ಚಿಕಿತ್ಸೆಗೆ ಬರುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಸಮಿತಿ ಸಂಚಾಲಕರು ವಿನಂತಿಸಿರುತ್ತಾರೆ.

LEAVE A REPLY

Please enter your comment!
Please enter your name here