ಬನ್ನೂರು ನೆಕ್ಕಿಲದಲ್ಲಿ ತಂಡದಿಂದ ಹಲ್ಲೆ – ಆರೋಪ, ಪ್ರತ್ಯಾರೋಪ

0

ಪುತ್ತೂರು: ಬನ್ನೂರು ನೆಕ್ಕಿಲದಲ್ಲಿ ತಂಡದಿಂದ ಫೆ.22ರ ರಾತ್ರಿ ಹಲ್ಲೆ ನಡೆಸಿರುವ ಕುರಿತು ಎರಡು ಕಡೆಯಿಂದ ಆರೋಪ ಮತ್ತು ಪ್ರತ್ಯಾರೋಪಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬನ್ನೂರು ಗ್ರಾಮದ ನೆಕ್ಕಿಲ ನಿವಾಸಿ ವಿಜೇತ್ ಗೌಡ ಎಂಬವರು ಹಲ್ಲೆಗೊಳಗಾಗಿದ್ದು, ಅವರಿಗೆ ಸ್ಥಳೀಯರಾದ ಪ್ರತಾಪ್ ಮತ್ತು ಆತನ ಸಂಗಡಿಗರಾದ ಅಭಿಜಿತ್ ಮತ್ತು ಮತ್ತಿಬ್ಬರು ಮನೆಗೆ ಬಂದು ಹಲ್ಲೆ ನಡೆಸಿದ್ದಾರೆ. ವಿಜೇತ್ ಅವರ ತಾಯಿ ಹಲ್ಲೆಯನ್ನು ತಪ್ಪಿಸಲು ಹೋದಾಗ ಅವರನ್ನು ಆರೋಪಿಗಳು ದೂಡಿ ಹಾಕಿರುವುದಾಗಿ ಆರೋಪಿಸಲಾಗಿದೆ. ಇದೇ ವೇಳೆ ವಿಜೇತ್ ಗೌಡ ಅವರ ಮನೆಗೆ ಬಂದ ಕಿರಣ್ ಡಿಸೋಜ, ನಿಶಾ, ರವಿಚಂದ್ರ ಹಾಗೂ ರಂಜಿತ್ ರವರಿಗೂ ಆರೋಪಿಗಳು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿದಲ್ಲದೆ, ಸ್ಥಳಕ್ಕೆ ಇನ್ನಷ್ಟು ಜನರು ಬರುವುದನ್ನು ಕಂಡು ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ವಿಜೇತ್ ಗೌಡ ಮತ್ತು ಮತ್ತಿಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸೆಕ್ಷನ್ ಕಲಂ: 143, 147, 148, 448, 504, 323, 324, 307, 354, 506 ಜೊತೆಗೆ 34 ಐಪಿಸಿ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯಾರೋಪ: ಘಟನೆಗೆ ಸಂಬಂಧಿಸಿ ಬನ್ನೂರು ನೆಕ್ಕಿಲ ನಿವಾಸಿ ಪ್ರತಾಪ್ ಎಂಬವರ ಪತ್ನಿ ವೈಶಾಲಿ ಎಂಬವರು ನೀಡಿದ ದೂರಿನಂತೆ ನನ್ನ ಗಂಡ ಪ್ರತಾಪ್ ಅವರಿಗೆ ಆರೋಪಿಗಳಾದ ರಂಜಿತ್, ವಿಜೀತ್, ರವಿ, ಕಿರಣ್ ಮತ್ತು ವಿಜಯ್ ಎಂಬವರುಗಳು ಚಾಕುವಿನಿಂದ ಹಲ್ಲೆ ನಡೆಸಿ, ಅವ್ಯಾಚ ಶಬ್ಧಗಳಿಂದ ಬೈದು ಜೀವಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಲಾಗಿದೆ.ಈ ದೂರಿನ ಮೇರೆಗೆ ಪೊಲೀಸರು ಆರೋಪಿಗಳ‌‌ ವಿರುದ್ಧ ಸೆಕ್ಷನ್ ಕಲಂ: 143, 147, 148, 323, 324, 504, 506 ಜೊತೆಗೆ 149 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here