ಮಾ. 4: ಗಯಾಪದ ಕಲಾವಿದೆರ್ ಉಬಾರ್’ ತಂಡದಿಂದ ಮುಗೇರಡ್ಕ ಪೊಸಮೆನ್ಪದವಿ‌ನಲ್ಲಿ ‘ಏತ್ ಪಂಡಲಾ ಆತೆ’ 17 ನೇ ಪ್ರಯೋಗ

0

ಪುತ್ತೂರು: ‘ಗಯಾಪದ ಕಲಾವಿದೆರ್ ಉಬಾರ್’ ರಂಗಭೂಮಿ ತಂಡದ ನಾಟಕಗಳು ಯಶಸ್ವೀ ಪ್ರದರ್ಶನಗೊಳ್ಳುತ್ತಿದ್ದು, ‘ಏತ್ ಪಂಡಲಾ ಆತೆ’ ನಾಟಕದ ಯಶಸ್ವೀ 17 ನೇ ಪ್ರಯೋಗ ಮಾ. 4 ರಂದು ರಾತ್ರಿ ನರಿಮೊಗರು ಗ್ರಾಮದ ಮುಗೇರಡ್ಕ ಪೊಸಮೆನ್ಪದವಿನಲ್ಲಿ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ನೇಮೋತ್ಸವದ ಅಂಗವಾಗಿ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೆ ಶಶಿಕುಮಾರ್ ಕೂಳೂರು ಕಥೆ ರಚನೆ, ಸಂಭಾಷಣೆ ಹಾಗು ನಿರ್ದೇಶನ ನೀಡಿದ್ದಾರೆ.


ಬಾಲಕೃಷ್ಣ ಪೂಜಾರಿ ಪೆರುವಾಯಿಯವರ ಸಾರಥ್ಯದಲ್ಲಿ, ಕಿಶೋರ್ ಜೋಗಿ ಉಬಾರ್ ಸಂಚಾಲಕತ್ವದಲ್ಲಿ, ರಾಜೇಶ್ ಶಾಂತಿನಗರರವರ ಸಲಹೆ ಸಹಕಾರದಲ್ಲಿ,‌ ಕಲಾವಿದರಾಗಿ ಅಶೋಕ್ ಬನ್ನೂರು, ರಾಜಶೇಖರ್ ಶಾಂತಿನಗರ, ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ದಿವಾಕರ ಸುರ್ಯ, ಕಿಶನ್ ಸುರ್ಯ, ಅನಿಲ್ ಇರ್ದೆ, ಸತೀಶ್ ಶೆಟ್ಟಿ ಹೆನ್ನಾಳ, ಕಿರಣ್ ಶಾಂತಿ ನಗರ, ಪ್ರೀತಂ ಶಾಂತಿನಗರ, ಚೇತನ್, , ಅನುಷಾ ಜೋಗಿ ಪುರುಷರಕಟ್ಟೆ, ಸಂಧ್ಯಾಶ್ರಿ ಹಿರೆಬಂಡಾಡಿ, ವೈಶಾಲಿ ಎಂ. ಕುಂದರ್ , ಶರಣ್ಯರಾಜಾಶೇಖರ್ ಹಾಗೂ ಗಂಗಾಧರ ಟೈಲರ್, ದೀಪಕ್ ಪೈ ರಾಮನಗರ, ರಾಜೇಶ್ ಕೆಮ್ಮಾಯಿ ಭೂಮಿಕೆಯಲ್ಲಿದ್ದಾರೆ.


ಸಿದ್ದು ಬೆದ್ರ ರಂಗಾಲಂಕಾರ, ವೇದಸ್ಯ ಕುಲಾಲ್ ವರ್ಣಾಲಂಕಾರ, ಕಾರ್ತಿಕ ಶಾಸ್ತ್ರಿ ಮಣಿಲ ಸಂಗೀತ, ಕೃಷ್ಣ ಮುಂಡ್ಯರವರ ಧ್ವನಿ ಮತ್ತು ಬೆಳಕಿನಲ್ಲಿ, ಗುಣಕರ ಅಗ್ನಾಡಿಯವರ ಸಹಕಾರದಲ್ಲಿ ನಾಟಕ ಮೂಡಿಬರುತ್ತಿದೆ.

LEAVE A REPLY

Please enter your comment!
Please enter your name here