ಕೊಡಿಪ್ಪಾಡಿ ಪಂಬತ್ತಮಜಲು ಗುಡ್ಡಕ್ಕೆ ಬೆಂಕಿ

0

ಪುತ್ತೂರು: ಕೊಡಿಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಪಂಬತ್ತಮಜಲು ಎಂಬಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದಿರುವ ಘಟನೆ ಮಾ.4 ರಂದು ನಡೆದಿದೆ. ಮಧ್ಯಾಹ್ನ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ ಎನ್ನಲಾಗಿದೆ.

ಬೆಂಕಿ ಬಿದ್ದಿರುವ ಬಗ್ಗೆ ಸಾರ್ವಜನಿಕರು ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಿದ್ದರು.

ಗ್ರಾ.ಪಂ ಅಧ್ಯಕ್ಷೆ ರೇಖಾ, ಸದಸ್ಯ ಗಿರಿಧರ್ ಗೌಡ ಗೋಮುಖ, ಪಿಡಿಓ ಶರೀಪ್, ಕಾರ್ಯದರ್ಶಿ ಭವಾನಿ, ಸಿಬಂದಿಗಳಾದ ಪ್ರಶಾಂತ್, ಕಿಶನ್, ಸ್ಥಳೀಯರಾದ ಉದಯ ಭಟ್, ಧೀರಜ್, ಸುಜಿತ್ ಹನಿಯೂರು ಸೇರಿದಂತೆ ಹಲವು ಮಂದಿ ಸೇರಿಕೊಂಡು ಉದಯ ಭಟ್ ರವರ ಮನೆಯ ಕೊಳವೆಬಾವಿಯ ಪಂಪ್ ನಿಂದ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ.

LEAVE A REPLY

Please enter your comment!
Please enter your name here