ಇಚ್ಲಂಪಾಡಿ ದೈಯ್ಯೊಂಕ್ಲುಗುಡ್ಡೆಯಲ್ಲಿ ದೈವಗಳ ನೇಮೋತ್ಸವ

0

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಬಂಧಪಟ್ಟ ದೈಯ್ಯೊಂಕ್ಲು ಗುಡ್ಡೆಯ ಸಾನಿಧ್ಯದಲ್ಲಿರುವ ದೈವಗಳ ನೇಮೋತ್ಸವ ಮಾ.14ರಂದು ರಾತ್ರಿ ನಡೆಯಿತು.

ಮಧ್ಯಾಹ್ನ ಶ್ರೀ ದೈವಗಳಿಗೆ ಶುದ್ಧಿಕಲಶ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದು ಎಣ್ಣೆ ಬೂಳ್ಯ ನೀಡಲಾಯಿತು. ಬಳಿಕ ಶ್ರೀ ದೈಯ್ಯೊಂಕ್ಲು, ಶ್ರೀ ಮಹಿಷಂದಾಯ, ಶ್ರೀ ವ್ಯಾಘ್ರಚಾಮುಂಡಿ, ಶ್ರೀ ಪಂಜುರ್ಲಿ, ಶ್ರೀ ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಿತು. ಪ್ರಧಾನ ಅರ್ಚಕ ಈಶ್ವರ ಪ್ರಸಾದ್ ಪಿ.ವಿ.ಶಾಸಿಯವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶುಭಾಕರ ಹೆಗ್ಗಡೆ, ನೇಮೋತ್ಸವ ಸಮಿತಿ ಅಧ್ಯಕ್ಷ ಜಯರಾಜ ಗೌಡ ಕೊರಮೇರು, ಕಾರ್ಯದರ್ಶಿ ಗಿರೀಶ್ ಸಾಲಿಯಾನ್ ಬದನೆ, ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರುಕ್ಮಯ ಗೌಡ ಕೊರಮೇರು, ಕಾರ್ಯದರ್ಶಿ ಹರೀಶ್ ಶೆಟ್ಟಿ ನೇರ್ಲ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಭಾಸ್ಕರ ಎಸ್.ಗೌಡ ಒಡ್ಯೆತ್ತಡ್ಕ, ಕಾರ್ಯದರ್ಶಿ ದಿನೇಶ್ ಗೌಡ ಕಲ್ಯ, ಉಳ್ಳಾಕ್ಲು ಸೇವಾ ಸಮಿತಿ ಅಧ್ಯಕ್ಷ ಹರೀಶ್ ಗೌಡ ನೇರ್ಲ, ಕಾರ್ಯದರ್ಶಿ ಆನಂದ ಶೆಟ್ಟಿ ಕಂಚಿನಡ್ಕ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕಾರ್ಯದರ್ಶಿ ಶಾಂತರಾಮ ಕುಡಾಲ, ಗಂಗಾಧರೇಶ್ವರ ದೇವಸ್ಥಾನದ ಅಧ್ಯಕ್ಷ ಉಣ್ಣಿಕೃಷ್ಣನ್ ನಾಯರ್ ಮೊಂಟೆತ್ತಡ್ಕ, ಹರೀಶ್ ಭಟ್ ಕೋಡಿಂಬಾಳ, ಮಹಾವೀರ ಜೈನ್ ಡೆಪ್ಪುಣಿ, ಜಿನೇಂದ್ರ ಇಂದ್ರ ಬಸ್ತಿ, ಡಾ.ರವೀಂದ್ರ ಬಲ್ಯ, ಮಾಯಿಲಪ್ಪ ಶೆಟ್ಟಿ ಹೊಸಮನೆ, ರಾಧಾಕೃಷ್ಣ ಗೌಡ ಕೆರ್ನಡ್ಕ, ರಾಮಕೃಷ್ಣ ಗೌಡ ಕೊರಮೇರು, ರಮೇಶ್ ಗೌಡ ಕೊರಮೇರು, ಮೋನಪ್ಪ ಗೌಡ ಕಲ್ಯ, ಜಯಾನಂದ ಶೆಟ್ಟಿ ಗುತ್ತಿನಮನೆ, ಮಾಧವ ಕೆಡೆಂಬೇಲು, ಕೇಶವ ಗೌಡ ಅಲೆಕ್ಕಿ, ಶ್ರೀನಿವಾಸ ಪೂಜಾರಿ ನಿಡ್ಯಡ್ಕ, ಸುರೇಂದ್ರ ಜೈನ್ ಗುತ್ತಿನಮನೆ, ವೇಣುಗೋಪಾಲ ಶೆಟ್ಟಿ ಹೊಸಮನೆ, ಉದಯಕುಮಾರ್ ಹೊಸಮನೆ, ನಾರಾಯಣ ಪೂಜಾರಿ ಬರಮೇಲು, ಹರೀಶ್ ಪೂಜಾರಿ ಮುಚ್ಚಿಲ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here