ಗಿರೀಶ್ ಗೌಡ ಮರಿಕೆ ಸ್ಮರಣಾರ್ಥ ಮಾ.18-19 ಸಂಟ್ಯಾರ್ ಮಿನಿಪದವುನಲ್ಲಿ ಓವರ್‌ಆರ್ಮ್ ಕ್ರಿಕೆಟ್ ಪಂದ್ಯಾಟ

0

ಪುತ್ತೂರು: ಸಂಟ್ಯಾರು ಶ್ರೀ ವಿನಾಯಕ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ಗಿರೀಶ್ ಗೌಡ ಮರಿಕೆ ಸ್ಮರಣಾರ್ಥ ಎರಡು ದಿನಗಳ ಮುಕ್ತ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾ.18 ಮತ್ತು 19ರಂದು ಸಂಟ್ಯಾರು ಗ್ರಾಮಾಂತರ ಕ್ರೀಡಾಂಗಣ ಮಿನಿಪದವು ಇಲ್ಲಿ ನಡೆಯಲಿದೆ.

ಪಂದ್ಯಾಟದಲ್ಲಿ ಪ್ರಥಮ ಬಹುಮಾನ ರೂ.15,001/-ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ.10,001/- ಹಾಗೂ ಟ್ರೋಫಿ ಹಾಗೂ ಇತರ ಬಹುಮಾನಗಳು ಇರಲಿದೆ. ಪ್ರವೇಶ ಶುಲ್ಕ ರೂ.21೦೦/- ಇದ್ದು ಮೊದಲು ಪ್ರವೇಶ ಶುಲ್ಕ ಪಾವತಿಸಿ ನೋಂದಾಯಿಸಿದ 32 ತಂಡಗಳಿಗೆ ಮಾತ್ರ ಅವಕಾಶವಿರುತ್ತದೆ ಎಂದು ಸ್ಪೋರ್ಟ್ಸ್ ಕ್ಲಬ್‌ನ ಶರತ್ ಆಳ್ವರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 8762669027, 9900490461 ಅಥವಾ 7899866588ಗೆ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here