ಉರ್ಲಾಂಡಿ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯಿಂದ ಶ್ರೀ ಸತ್ಯನಾರಾಯಣ ಪೂಜೆ

0

ಪುತ್ತೂರು: ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಸತ್ಯನಾರಾಯಣನಗರ, ಉಲಾಂಡಿ ಚಾಂದ್ರಮಾನ ಯುಗಾದಿ ಪ್ರಯುಕ್ತ 51ನೇ ವರ್ಷದ ಸತ್ಯನಾರಾಯಣ ಪೂಜೆಯು ಮಾ.22ರಂದು ನಡೆಯಿತು.

ಬೆಳಿಗ್ಗೆ ಸ್ಥಳ ಶುದ್ಧಿ, ವಾಸ್ತುಪೂಜೆ, ಅಶ್ವತ್ಥ ಪೂಜೆ, ಸಂಜೆ ವೆ.ಮೂ. ಬನಾರಿ ಹರಿಪ್ರಸಾದ್ ಭಟ್‌ರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಸರಸ್ವತಿ ಭಜನಾ ಮಂದಿರದ ಸದಸ್ಯರಿಂದ ಭಜನೆ, ಗಣೇಶ್ ಭಟ್ ನೀರ್ಪಾಜೆ ಕನ್ಯಾನರವರಿಂದ ಸತ್ಯನಾರಾಯಣ ದೇವರ ಕಥಾಪ್ರವಚನ, ಸ್ಥಳೀಯ ಪ್ರತಿಭೆ ಮಾನಸ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಬಳಿಕ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಗೌರವಾಧ್ಯಕ್ಷ ಎ.ಜೆ. ನೈಕ್, ಅಧ್ಯಕ್ಷ ನಡುಸಾರು ಶಿವ ಭಟ್, ಕಾರ್ಯದರ್ಶಿ ಅಶೋಕ್ ಕುಂಬ್ಲೆ, ಪುಷ್ಪರಾಜ್ ಹೆಗ್ಡೆ, ಉಪಾಧ್ಯಕ್ಷರಾದ ಕವಿತಾ ನಾರಾಯಣಿ, ಸ್ವರ್ಣಲತಾ ಹೆಗ್ಡೆ, ರಮೇಶ್ ಗೌಡ ಉರ್ಲಾಂಡಿ, ದಾಸ ನಾಯರಡ್ಕ, ಜೊತೆ ಕಾರ್ಯದರ್ಶಿ ಮೋಹನ್ ನಾಯರ್, ಅನಿಲ್ ಕುಮಾರ್, ಯೋಗಾನಂದ, ಕೋಶಾಧಿಕಾರಿ ಪುರುಷೋತ್ತಮ ಶೆಟ್ಟಿ, ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸದಸ್ಯರಾದ ಭಾವಿ ಅಶೋಕ್ ಶೆಣೈ, ಸಂತೋಷ್‌ಕುಮಾರ್ ಬೊಳುವಾರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here