ಮಾ.24: ವಿದುಷಿ ಆಸ್ತಿಕ ಸುನೀಲ್ ಶೆಟ್ಟಿಯವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ನೃತ್ಯಕಲಾ ಕ್ಷೇತ್ರದಲ್ಲಿ ದುಬೈ ಹಾಗೂ ಹುಟ್ಟೂರಿನಲ್ಲಿ ಬಹಳಷ್ಟು ಸಾಧನೆ ಮಾಡಿ ಇತ್ತೀಚೆಗೆ ಅಗಲಿದ ವಿಶ್ವಕಲಾನಿಕೇತನ ನೃತ್ಯ ಸಂಸ್ಥೆಯ ನೃತ್ಯಗುರು, ಯಕ್ಷಗಾನ ಕಲಾವಿದೆ ವಿದುಷಿ ಆಸ್ತಿಕ ಸುನೀಲ್ ಶೆಟ್ಟಿಯವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯ ಹಾಗೂ ಶ್ರದ್ಧಾಂಜಲಿ ಸಭೆಯು ಮಾ.24 ರಂದು ಮಧ್ಯಾಹ್ನ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾ ಭವನದಲ್ಲಿ ಜರಗಲಿದೆ.

ಬಂಧುಮಿತ್ರರು, ಹಿತೈಷಿಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ಅಗಲಿದ ವಿದುಷಿ ಆಸ್ತಿಕ ಸುನೀಲ್ ಶೆಟ್ಟಿಯವರ ಪತಿ ಸುನೀಲ್ ಶೆಟ್ಟಿ, ಪುತ್ರ ಸಾಕ್ಷರ ಶೆಟ್ಟಿ, ತಾಯಿ ವಿದುಷಿ ಹಾಗೂ ಕರ್ನಾಟಕ ಕಲಾಶ್ರೀ ನಯನ ವಿ.ರೈ ಹಾಗೂ ಕುಟುಂಬಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here