ಚುನಾವಣಾ ನೀತಿ ಸಂಹಿತೆ ಜಾರಿ ಬೆನ್ನಲ್ಲೇ ಬಂಟ್ವಾಳ ಶಾಸಕರಿಂದ ಕಾರಲ್ಲಿದ್ದ ನಾಮಫಲಕ ತೆರವು

0

ಬಂಟ್ವಾಳ:ಚುನಾವಣಾ ಆಯೋಗ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೊಳಿಸಿದೆ.

ಇದರ ಬೆನ್ನಲ್ಲೇ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ತಮ್ಮ ಕಾರಿನ ನಾಮಫಲಕವನ್ನು ತೆರವುಗೊಳಿಸಿದ್ದು, ಆಯೋಗದ ನಿಯಮ ಪಾಲಿಸಿದ್ದಾರೆ.

ಶಾಸಕ ರಾಜೇಶ್ ನಾಯ್ಕ್‌ರವರು ಬಂಟ್ವಾಳದ ಸ್ನೇಹಿತರ ಮನೆಯಲ್ಲಿರುವ ಸಂದರ್ಭ ಚುನಾವಣಾ ದಿನಾಂಕ ಘೋಷಣೆ, ನೀತಿ ಸಂಹಿತೆ ಜಾರಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಚಾಲಕ ಮಂಜು ಅವರ ಮೂಲಕ, ತಮ್ಮ ವಾಹನದಲ್ಲಿ ಅಳವಡಿಸಿದ್ದ ‘ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕರು’ ನಾಮಫಲಕವನ್ನು ತೆರವುಗೊಳಿಸಿದರು.

LEAVE A REPLY

Please enter your comment!
Please enter your name here