ಎ.16: ವಿಶ್ವ ಹೋಮೀಯೊಪತಿ ದಿನಾಚರಣೆ ಹಾಗೂ ವೈದ್ಯರ ವಿಚಾರ ಸಂಕಿರಣ

0

ಪುತ್ತೂರು : ಭಾರತೀಯ ಹೋಮೀಯೊಪತಿ ವೈದ್ಯರ ಸಂಘ(IHMA) ಕರ್ನಾಟಕ ಮತ್ತು ಮಂಗಳೂರು ಘಟಕದ ಆಶ್ರಯದಲ್ಲಿ ಎ.16 ರಂದು ಮ. 2.00 ಗಂಟೆಗೆ ನಗರದ GHS ರೋಡ್ (ಹಂಪನಕಟ್ಟೆ) ನಲ್ಲಿರುವ Hotel Saffron ಸಭಾಂಗಣದಲ್ಲಿ ಹೋಮೀಯೊಪತಿ ಪದ್ಧತಿಯ ಜನಕ ಸಾಮುಯಲ್ ಹಾನಿಮನ್ ಜನ್ಮದಿನಾಚರಣೆ ಅಂಗವಾಗಿ ವಿಶ್ವ ಹೋಮೀಯೊಪತಿ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಹೋಮೀಯೊಪತಿ ವೈದ್ಯರ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ ಮೊಹಮ್ಮದ್ ಇಕ್ಬಾಲ್ ಅವರು ಆಗಮಿಸುತ್ತಿದ್ದಾರೆ.

ಬೆಂಗಳೂರಿನ ಖ್ಯಾತ ಹೋಮೀಯೊಪತಿ ತಜ್ಞ ವೈದ್ಯ ಡಾ. ತೇಜಸ್ವಿ ಪಾಟೀಲ್, ಮಂಗಳೂರಿನ ಖ್ಯಾತ ವೈದ್ಯ ಡಾ. ಪ್ರವೀಣ್ ರಾಜ್ ಆಳ್ವ, ಫಾದರ್ ಮುಲ್ಲರ್ ಹೋಮೀಯೊಪತಿ ಮೆಡಿಕಲ್ ಕಾಲೇಜಿನ ಉಪನ್ಯಾಸಕರು ಗಳಾದ ಡಾ. ವಿವೇಕ್ ಶಕ್ತಿಧರಣ್ ಹಾಗೂ ಡಾ. ಫಾತಿಮಾ ಸೌದತ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ವೈದ್ಯರನ್ನು ಉದ್ದೇಶಿಸಿ ಉಪನ್ಯಾಸ ನೀಡಲಿದ್ದಾರೆ.

ಹಾಗೆಯೇ ಈ ಸಂದರ್ಭದಲ್ಲಿ ಹೋಮೀಯೊಪತಿ ಕ್ಷೇತ್ರದಲ್ಲಿ ಮಾಡಿದ ಅಪೂರ್ವ ಸಾಧನೆಗೆ ಕುಂದಾಪುರ ಖ್ಯಾತ ಹೋಮೀಯೊಪತಿ ವೈದ್ಯ ಡಾ. ಉತ್ತಮ ಕುಮಾರ್ ಶೆಟ್ಟಿ ಯವರನ್ನು ವೈದ್ಯರ ಸಂಘದ ಪರವಾಗಿ ಸನ್ಮಾನಿಸಲಾಗುವುದು.

ದಕ್ಷಿಣ ಕನ್ನಡ-ಉಡುಪಿ-ಮಡಿಕೇರಿ ಜಿಲ್ಲೆಯ ಎಲ್ಲಾ ಹೋಮೀಯೊಪತಿ ವೈದ್ಯರು ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಐಎಚ್ಎಂಎ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರ್ ರೈ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here