ಕೃತ್ಯ ಎಸಗಿದವರು ಪೊಲೀಸರು, ಅವರ ತಲೆದಂಡವಾಗಬೇಕು-ಕಿಶೋರ್‌ ಬೊಟ್ಯಾಡಿ

0

ಪುತ್ತೂರು: ಯಾರು ಸ್ವಾರ್ಥದ ಬೇಳೆ ಬೇಯಿಸಿ ಕೊಳ್ಳುವುದು ಬೇಡ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸದಸ್ಯ ಕಿಶೋರ್ ಬೊಟ್ಯಾಡಿ ಹೇಳಿದ್ದಾರೆ.

ಯತ್ನಾಳ್ ಭೇಟಿ ಬಳಿಕ ಸುದ್ದಿಯೊಂದಿಗೆ ಮಾತನಾಡಿದ ಕಿಶೋರ್ ಬೊಟ್ಯಾಡಿ, ನೊಂದ ಕಾರ್ಯಕರ್ತರ ನೋವು ನಮ್ಮ ನೋವೆಂದು ಜತೆಯಲ್ಲಿದ್ದೇವೆ. ಅವರ ಮನೆಗೆ ಹೋಗಿ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಆದರೆ ಬೇರೆ ಬೇರೆ ಕಾರಣಕ್ಕೆ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ಯತ್ನಾಳ್ ಎಲ್ಲರ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದಾರೆ. ತಳ್ಳುವ ಬಾಗಿಲು ಹಾಕುವ ಅಗತ್ಯ ಇರಲಿಲ್ಲ. ಅರುಣ್ ಪುತ್ತಿಲ ಯಾರನ್ನು ತಪ್ಪು ದಾರಿಗೆ ಎಳೆಯಬಾರದು.ಕೃತ್ಯ ಎಸಗಿದ ಪೊಲೀಸರ ತಲೆದಂಡವಾಗಬೇಕು. ಈ ಘಟನೆಯನ್ನು ಬಳಸಿಕೊಂಡು ರಾಜ್ಯಾಧ್ಯಕ್ಷರ ನಾಯಕರ ಮೇಲೆ ಗೂಬೆಕೂರಿಸಲಾಗುತ್ತಿದೆ. ನಾವೆಲ್ಲರೂ ಅಣ್ಣತಮ್ಮಂದಿರಂತೆ ಬದುಕೋಣ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here