ಒಬ್ಬ ಹೋದರೆ ಸಾವಿರ ಜನ ಹುಟ್ಕೋತೀವಿ – ಹರ್ಷ ಸಹೋದರಿ ಅಶ್ವಿನಿ

0

ಪುತ್ತೂರು: ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾದ ಗಾಯಾಳುಗಳನ್ನು ಶಿವಮೊಗ್ಗದ ಹರ್ಷಾ ಹೆತ್ತವರು ಮತ್ತು ಸಹೋದರಿ ಭೇಟಿಯಾಗಿ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.

ಭೇಟಿಯ ಬಳಿಕ ಸುದ್ದಿಯೊಂದಿಗೆ ಮಾತನಾಡಿದ ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಸಹೋದರಿ ಅಶ್ವಿನಿ, ʼಗಾಯಾಳುಗಳ ಪರಿಸ್ಥಿತಿ ನೋಡಿದ್ರೆ ಬಾಯಿಂದ ಮಾತು ಹೊರಡುತ್ತಿಲ್ಲ. ಕಾರ್ಯಕರ್ತರು ಹಿಂದೂ ಸಮಾಜವನ್ನು ಗಟ್ಟಿ ಮಾಡಲು ಹೋರಾಟ ಮಾಡುತ್ತಿದ್ದಾರೆ. ಅವರು ಸಮಾಜಕ್ಕೆ ಯಾವುದೇ ರೀತಿ ದ್ರೋಹ ಬಗೆಯುತ್ತಿಲ್ಲ. ಅರುಣ್ ಪುತ್ತಿಲ ಇಲ್ಲದಿದ್ದರೆ ಅವರನ್ನು ಜೀವಂತ ನೋಡಲು ಸಾಧ್ಯವಿರಲಿಲ್ಲ. ಜೀವ ಅಮೂಲ್ಯವಾದದ್ದು, ಯಾರಿಗೂ ತೊಂದ್ರೆ ಮಾಡಿ ಹಿಂಸೆ ಕೊಡಬೇಡಿ. ಒಬ್ಬ ಹೋದ ಅಂತ ನಾವು ಕುಗ್ಗಲ್ಲ. ಒಬ್ಬ ಹೋದ್ರೆ ಸಾವಿರ ಜನ ಹುಟ್ಕೋತ್ತೀವಿʼ ಎಂದು ಹೇಳಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here